[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 3ನೇ ನವೆಂಬರ 2021 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಬ್ಯಾಂಕುಗಳಿಗೆ ಪರಿಷ್ಕೃತ PCA ಚೌಕಟ್ಟನ್ನು ನೀಡಿದ

2. ARC ಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದ RBI.

3. ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್.

4. ಸ್ಥಿತಿಸ್ಥಾಪಕ ದ್ವೀಪ ರಾಜ್ಯಗಳಿಗೆ ಮೂಲಸೌಕರ್ಯ.

5. ‘ಪರಿಶಿಷ್ಟ ಬುಡಕಟ್ಟುಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳು (ಹಕ್ಕುಗಳ ಮಾನ್ಯತೆ / ಗುರುತಿಸುವಿಕೆ ಕಾಯಿದೆ)’.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. J&K ನಲ್ಲಿ ಭಯೋತ್ಪಾದನಾ ನಿಗ್ರಹ ದಳದ ಸ್ಥಾಪನೆ.

2. ರಕ್ಷಣಾ ಖರೀದಿ ಸಮಿತಿ (DAC).

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಪ್ರಗತಿ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಬ್ಯಾಂಕುಗಳಿಗೆ ಪರಿಷ್ಕೃತ ‘ತ್ವರಿತ ಸರಿಪಡಿಸುವ ಕ್ರಿಯಾ’ ಕಾರ್ಯವಿಧಾನ (PCA) ಚೌಕಟ್ಟನ್ನು ನೀಡಿದ RBI:


(RBI issues revised PCA framework for banks)

ಸಂದರ್ಭ:

ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳಿಗೆ ವಿಶೇಷ ಪರಿಷ್ಕೃತ ‘ತ್ವರಿತ ಸರಿಪಡಿಸುವ/ತಿದ್ದುಪಡಿ ಕ್ರಿಯಾ’ ಕಾರ್ಯವಿಧಾನ’ (Prompt Corrective Action – PCA) ಚೌಕಟ್ಟನ್ನು ಬಿಡುಗಡೆ ಮಾಡಿದೆ. ಈ ಚೌಕಟ್ಟಿನ ಮೂಲಕ, ಬ್ಯಾಂಕುಗಳು ಸಕಾಲಿಕ ಮೇಲ್ವಿಚಾರಣಾ ಮಧ್ಯಸ್ಥಿಕೆಗಳನ್ನು  ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಅಲ್ಲದೆ ‘PCA ಫ್ರೇಮ್‌ವರ್ಕ್’ ಮಾರುಕಟ್ಟೆ ಶಿಸ್ತಿಗೆ ಪರಿಣಾಮಕಾರಿ ಸಾಧನವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಪರಿಷ್ಕೃತ ಚೌಕಟ್ಟಿನ ಕುರಿತು:

  1. ಪರಿಷ್ಕೃತ PCA ಫ್ರೇಮ್‌ವರ್ಕ್ ಜನವರಿ 1, 2022 ರಿಂದ ಜಾರಿಗೆ ಬರಲಿದೆ.
  2. ಪರಿಷ್ಕೃತ ಚೌಕಟ್ಟಿನ ಅಡಿಯಲ್ಲಿ, ಬಂಡವಾಳ, ಆಸ್ತಿ ಗುಣಮಟ್ಟ ಮತ್ತು ಪರಿಣಾಮಕಾರಿತ್ವವನ್ನು ಪ್ರಮುಖವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.
  3. ಪರಿಷ್ಕೃತ ಚೌಕಟ್ಟಿನ ಪ್ರಕಾರ ಬಂಡವಾಳ, ಆಸ್ತಿ ಗುಣಮಟ್ಟ ಮತ್ತು ಪರಿಣಾಮಕಾರಿತ್ವವನ್ನು ಪತ್ತೆಹಚ್ಚಲು,CRAR ಅಥವಾ ಸಾಮಾನ್ಯ ಇಕ್ವಿಟಿ ಶ್ರೇಣಿ 1 ಅನುಪಾತ, ನಿವ್ವಳ NPA ಅನುಪಾತ ಮತ್ತು ಶ್ರೇಣಿ 1 ಪರಿಣಾಮಕಾರಿತ್ವ ಅನುಪಾತವನ್ನು ಸೂಚಕಗಳಾಗಿ ಬಳಸಲಾಗುತ್ತದೆ.

‘ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್’ (PCA) ಎಂದರೇನು?

  1. ‘ಕ್ಷಿಪ್ರ ಸರಿಪಡಿಸುವ ಕ್ರಮ’ (PCA) ಎನ್ನುವುದು ಆರ್‌ಬಿಐ, ದುರ್ಬಲ ಆರ್ಥಿಕ ಮಾಪನಗಳನ್ನು ಹೊಂದಿರುವ ಬ್ಯಾಂಕುಗಳನ್ನು ತನ್ನ ಕಾವಲಿನಲ್ಲಿಟ್ಟುಕೊಳ್ಳುವ ಕಾರ್ಯವಿಧಾನವಾಗಿದೆ.
  2. ಆರ್‌ಬಿಐ ‘ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್’ ಯಾಂತ್ರಿಕ ವ್ಯವಸ್ಥೆಯನ್ನು 2002 ರಲ್ಲಿ ಪರಿಚಯಿಸಿತು, ಬ್ಯಾಂಕುಗಳಿಗೆ ರಚನಾತ್ಮಕ ಆರಂಭಿಕ ಹಸ್ತಕ್ಷೇಪ ಯಾಂತ್ರಿಕ ವ್ಯವಸ್ಥೆ (structured early-intervention mechanism) ಕಳಪೆ ಆಸ್ತಿ ಗುಣಮಟ್ಟ ಅಥವಾ ಲಾಭವನ್ನು ನೀಡುವ ಸಾಮರ್ಥ್ಯದ ಕೊರತೆಯಿಂದಾಗಿ ‘ಬಂಡವಾಳದ ಕೊರತೆ’ (undercapitalised) ಆಗಿ ಮಾರ್ಪಟ್ಟಿದೆ.
  3. ಇದು ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಷ್ಕ್ರಿಯ ಆಸ್ತಿಗಳ / ವಸೂಲಾಗದ ಸಾಲದ ಸರಾಸರಿ ಪ್ರಮಾಣದ (NPA) ಸಮಸ್ಯೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ.
  4. 2017 ರಲ್ಲಿ, ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ ಕಾರ್ಯನಿರತ ಗುಂಪು ಮತ್ತು ಭಾರತದ ಹಣಕಾಸು ಸಂಸ್ಥೆಗಳ ರೆಸಲ್ಯೂಶನ್ ಅಡ್ಮಿನಿಸ್ಟ್ರೇಷನ್ ಕುರಿತ ಹಣಕಾಸು ವಲಯದ ಶಾಸನ ಸುಧಾರಣಾ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಈ ಕಾರ್ಯವಿಧಾನವನ್ನು ಪರಿಶೀಲಿಸಲಾಗಿದೆ.

‘ಪ್ರಾಂಪ್ಟ್ ಸರಿಪಡಿಸುವ ಕ್ರಿಯೆ’ ಕಾರ್ಯವಿಧಾನವನ್ನು ಯಾವಾಗ ಜಾರಿಗೆ ತರಲಾಗುತ್ತದೆ?

ಕೆಲವು ಬ್ಯಾಂಕುಗಳು ಅಪಾಯದ ಮಿತಿಗಳನ್ನು ಉಲ್ಲಂಘಿಸಿದಾಗ ‘ಪ್ರಾಂಪ್ಟ್ ಸರಿಪಡಿಸುವ ಕ್ರಿಯೆ’ ಕಾರ್ಯವಿಧಾನವನ್ನು ಕಾರ್ಯಗತಗೊಳಿಸಲಾಗುತ್ತದೆ. ಕೆಲವು ಹಂತದ ಆಸ್ತಿ ಗುಣಮಟ್ಟ, ಲಾಭದಾಯಕತೆ ಮತ್ತು ಬಂಡವಾಳ ಮತ್ತು ಮುಂತಾದವುಗಳನ್ನು ಆಧರಿಸಿ ಮೂರು ಅಪಾಯದ ಮಿತಿಗಳನ್ನು ನಿಗದಿಪಡಿಸಲಾಗಿದೆ.

ನಿರ್ಬಂಧಗಳ ಪ್ರಕಾರಗಳು ಯಾವುವು?

‘ಪ್ರಾಂಪ್ಟ್ ಸರಿಪಡಿಸುವ ಕ್ರಿಯೆಯ’ ಅಡಿಯಲ್ಲಿ ಎರಡು ರೀತಿಯ ನಿರ್ಬಂಧಗಳಿವೆ: ಕಡ್ಡಾಯ ಮತ್ತು ವಿವೇಚನೆ.

ಲಾಭಾಂಶ, ಶಾಖಾ ವಿಸ್ತರಣೆ, ನಿರ್ದೇಶಕರ ಪರಿಹಾರದ ಮೇಲಿನ ನಿರ್ಬಂಧಗಳು ಕಡ್ಡಾಯ ವರ್ಗಕ್ಕೆ ಸೇರುತ್ತವೆ, ಆದರೆ ವಿವೇಚನೆಯ ನಿರ್ಬಂಧಗಳು ಸಾಲ ಮತ್ತು ಠೇವಣಿಗಳ ಮೇಲಿನ ನಿರ್ಬಂಧಗಳನ್ನು ಒಳಗೊಂಡಿರಬಹುದು.

 

PCA ಪ್ರಚೋದನೆಗೆ ಬ್ಯಾಂಕ್ ನ ಪ್ರತಿಕ್ರಿಯೆ ಏನು?

  1. ‘ಪ್ರಾಂಪ್ಟ್ ಸರಿಪಡಿಸುವ ಕ್ರಮ’ ಜಾರಿಗೆ ಬಂದಾಗ, ಶುಲ್ಕ ಆಧಾರಿತ ಆದಾಯವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ದುಬಾರಿ ಠೇವಣಿಗಳನ್ನು ನವೀಕರಿಸಲು ಅಥವಾ ಬಳಸಲು ಅನುಮತಿಸಲಾಗುವುದಿಲ್ಲ.
  2. ಬ್ಯಾಂಕುಗಳು ತಮ್ಮ ನಿಷ್ಕ್ರಿಯ ಆಸ್ತಿ (NPA) ದಾಸ್ತಾನುಗಳನ್ನು ಕಡಿಮೆ ಮಾಡಲು ಮತ್ತು ಹೊಸ NPAಗಳ ರಚನೆಯನ್ನು ನಿಲ್ಲಿಸಲು ವಿಶೇಷ ಕಾರ್ಯಾಚರಣೆಗಳನ್ನು ಕೈಗೊಳ್ಳಬೇಕಾಗುತ್ತದೆ.
  3. ಹೊಸ ವ್ಯಾಪಾರ ಕ್ಷೇತ್ರಗಳಿಗೆ ಪ್ರವೇಶಿಸಲು ಬ್ಯಾಂಕುಗಳಿಗೆ ಅನುಮತಿಸಲಾಗುವುದಿಲ್ಲ. ಅಂತರ ಬ್ಯಾಂಕ್ ಮಾರುಕಟ್ಟೆಯಿಂದ ಸಾಲ ತೆಗೆದುಕೊಳ್ಳುವುದಕ್ಕಾಗಿ ಆರ್‌ಬಿಐ ಬ್ಯಾಂಕ ಮೇಲೆ ನಿರ್ಬಂಧ ವಿಧಿಸುತ್ತದೆ.

 

ವಿಷಯಗಳು: ಅಂತರ್ಗತ ಬೆಳವಣಿಗೆ ಮತ್ತು ಸಂಬಂಧಿತ ಸಮಸ್ಯೆಗಳು.

ARC ಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದ RBI:


(RBI sets up committee to review working of ARCs) 

ಸಂದರ್ಭ:

ಆಸ್ತಿ ಪುನರ್ನಿರ್ಮಾಣ ಕಂಪನಿಗಳ (Asset Reconstruction Companies -ARCs) ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುವ ಸಲುವಾಗಿ, ರಿಸರ್ವ್ ಬ್ಯಾಂಕ್ ರಚಿಸಿರುವ ಸಮಿತಿಯು ಹಲವಾರು ಸಲಹೆಗಳನ್ನು ನೀಡಿದೆ.

ಹಿನ್ನೆಲೆ:

ಇತ್ತೀಚೆಗೆ, ರಿಸರ್ವ್ ಬ್ಯಾಂಕ್‌ ‘ಸುದರ್ಶನ್ ಸೇನ್’ ಅವರ ನೇತೃತ್ವದಲ್ಲಿ, ಹಣಕಾಸು ವಲಯದ ಪರಿಸರ ವ್ಯವಸ್ಥೆಯಲ್ಲಿ ‘ಆಸ್ತಿ ಪುನರ್ರಚನೆ ಕಂಪನಿಗಳ’ (Asset Reconstruction Companies- ARCs)  ಕಾರ್ಯವೈಖರಿಯನ್ನು ಸಮಗ್ರವಾಗಿ ಪರಿಶೀಲಿಸಲು ಮತ್ತು ಅಂತಹ ಸಂಸ್ಥೆಗಳ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು ಅನುವು ಮಾಡಿಕೊಡುವ ಸೂಕ್ತ ಕ್ರಮಗಳನ್ನು ಶಿಫಾರಸು ಮಾಡಲು ಸಮಿತಿಯನ್ನು ರಚಿಸಿದೆ.

ಸಲಹೆಗಳು:

  1. ಒತ್ತಡದ ಆಸ್ತಿಗಳನ್ನು ಮಾರಾಟ ಮಾಡಲು ಆನ್‌ಲೈನ್ ವೇದಿಕೆಯನ್ನು ರಚಿಸಬೇಕು.
  2. ಐಬಿಸಿ ಪ್ರಕ್ರಿಯೆಯ ಸಮಯದಲ್ಲಿ ‘ಆಸ್ತಿ ಪುನರ್ರಚನಾ ಕಂಪನಿಗಳು’ ‘ರೆಸಲ್ಯೂಶನ್ ಅರ್ಜಿದಾರರಾಗಿ’ (Resolution Applicants) ಕಾರ್ಯನಿರ್ವಹಿಸಲು ಅನುಮತಿಸಬೇಕು.
  3. AIF ಗಳು, FPI ಗಳು, AMC ಗಳು ಮತ್ತು NBFC ಗಳು ಸೇರಿದಂತೆ ಎಲ್ಲಾ ನಿಯಂತ್ರಿತ ಘಟಕಗಳಿಂದ ಹಣಕಾಸಿನ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ‘ಆಸ್ತಿ ಪುನರ್ನಿರ್ಮಾಣ ಕಂಪನಿಗಳಿಗೆ’ ಅವಕಾಶ ನೀಡಲು SARFAESI ಕಾಯಿದೆಯ ವಿಭಾಗ 5 ರ ವ್ಯಾಪ್ತಿಯನ್ನು ವಿಸ್ತರಿಸಿ.
  4. ₹500 ಕೋಟಿಗಿಂತ ಹೆಚ್ಚಿನ ಮೊತ್ತದ ಖಾತೆಗಳಿಗೆ, ದಿವಾಳಿ ಮೌಲ್ಯ (liquidation value) ಮತ್ತು ನ್ಯಾಯೋಚಿತ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಲು ಎರಡು ಬ್ಯಾಂಕ್‌ಗಳಿಂದ ಅನುಮೋದಿಸಲಾದ ಬಾಹ್ಯ ಮೌಲ್ಯಮಾಪಕರು ಮೌಲ್ಯಮಾಪನ ಮಾಡಬೇಕು.
  5. ಇದಲ್ಲದೆ, ಸಾಲದ ಆಯಾ ರೈಟ್-ಆಫ್ ಅನ್ನು ಅನುಮೋದಿಸುವ ಅಧಿಕಾರವನ್ನು ಹೊಂದಿರುವ ಉನ್ನತ ಮಟ್ಟದ ಸಮಿತಿಯಿಂದ ಮೀಸಲು ಬೆಲೆಯ ಅಂತಿಮ ಅನುಮೋದನೆಯನ್ನು ನೀಡಬೇಕು.

 

ಉಲ್ಲೇಖದ ನಿಯಮಗಳು:

  1. ‘ಆಸ್ತಿ ಪುನರ್ನಿರ್ಮಾಣ ಕಂಪನಿಗಳಿ’ (ARC) ಗೆ ಅನ್ವಯವಾಗುವ ಅಸ್ತಿತ್ವದಲ್ಲಿರುವ ಕಾನೂನು ಮತ್ತು ನಿಯಂತ್ರಕ ಚೌಕಟ್ಟನ್ನು ಪರಿಶೀಲಿಸುವುದು ಮತ್ತು ‘ಎಆರ್‌ಸಿ’ಗಳ ಪರಿಣಾಮಕಾರಿತ್ವವನ್ನು ಸುಧಾರಿಸುವ ಕ್ರಮಗಳಿಗಾಗಿ ಶಿಫಾರಸುಗಳನ್ನು ಮಾಡುವುದು.
  2. ಹಣಕಾಸು ನಷ್ಟ ಮತ್ತು ದಿವಾಳಿತನ ಸಂಹಿತೆ (IBC), 2016 ಸೇರಿದಂತೆ ಒತ್ತಡಕ್ಕೊಳಗಾದ ಸ್ವತ್ತುಗಳ ನಿರ್ಣಯದಲ್ಲಿ ARC ಗಳ ಪಾತ್ರವನ್ನು ಪರಿಶೀಲಿಸುವುದು ಮತ್ತು ಭದ್ರತಾ ರಸೀದಿ ಗಳಲ್ಲಿ ದ್ರವ್ಯತೆ ಮತ್ತು ವ್ಯಾಪಾರವನ್ನು ಸುಧಾರಿಸಲು ಸಲಹೆಗಳನ್ನು ನೀಡುವುದು.

ಆಸ್ತಿ ಪುನರ್ ನಿರ್ಮಾಣ ಕಂಪನಿ ‘(ARC) ಎಂದರೇನು?

ಆಸ್ತಿ ಪುನರ್ ನಿರ್ಮಾಣ ಕಂಪನಿಗಳು- (ARC) ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ‘ಕಾರ್ಯನಿರ್ವಹಿಸದ ಸ್ವತ್ತು / ‘ಬ್ಯಾಂಕುಗಳ ವಸೂಲಾಗದ ಸಾಲದ ಸರಾಸರಿ ಪ್ರಮಾಣ’ (Non Performing Assets- NPAs)ಗಳನ್ನು’ ಖರೀದಿಸುವ ಮೂಲಕ ಅವುಗಳ  ಬ್ಯಾಲೆನ್ಸ್ ಶೀಟ್‌ಗಳನ್ನು ತೆರವುಗೊಳಿಸುವ ವಿಶೇಷ ಹಣಕಾಸು ಸಂಸ್ಥೆಗಳಾಗಿವೆ. ಸಾಮಾನ್ಯ ಬ್ಯಾಂಕಿಂಗ್ ಚಟುವಟಿಕೆಗಳತ್ತ ಗಮನಹರಿಸಲು ಇದು ಬ್ಯಾಂಕುಗಳಿಗೆ ಸಹಾಯ ಮಾಡುತ್ತದೆ.

  1. ಬ್ಯಾಂಕುಗಳು ತಮ್ಮ ಸಮಯ ಮತ್ತು ಡೀಫಾಲ್ಟರ್‌ಗಳ ಪ್ರಯತ್ನಗಳನ್ನು ವ್ಯರ್ಥ ಮಾಡುವ ಬದಲು, ತಮ್ಮ ‘ಕಾರ್ಯನಿರ್ವಹಿಸದ ಸ್ವತ್ತುಗಳನ್ನು’ / ‘ಬ್ಯಾಂಕುಗಳ ವಸೂಲಾಗದ ಸಾಲದ ಸರಾಸರಿ ಪ್ರಮಾಣ’ (NPA) ಗಳನ್ನು ಆಸ್ತಿ ಪುನರ್ನಿರ್ಮಾಣ ಕಂಪನಿಗೆ (ARC) ಪರಸ್ಪರ ಒಪ್ಪಿದ ಬೆಲೆಗೆ ಮಾರಾಟ ಮಾಡಬಹುದು.
  2. ‘ಆಸ್ತಿ ಪುನರ್ನಿರ್ಮಾಣ ಕಂಪನಿ’ ಅಥವಾ ‘ARC’ ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನ ಅಡಿಯಲ್ಲಿ ನೋಂದಾಯಿಸಲಾಗಿರುತ್ತದೆ.

ಕಾನೂನು ಆಧಾರಗಳು:

ಹಣಕಾಸು ಸ್ವತ್ತುಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಮತ್ತು ಭದ್ರತಾ ಆಸಕ್ತಿಯ ಜಾರಿಗೊಳಿಸುವಿಕೆ –(Securitization and Reconstruction of Financial Assets and Enforcement of Security Interest –SARFAESI) ಕಾಯ್ದೆ 2002, ಭಾರತದಲ್ಲಿ ‘ಆಸ್ತಿ ಪುನರ್ನಿರ್ಮಾಣ ಕಂಪನಿ’ (ARC) ಗಳನ್ನು ರೂಪಿಸಲು ಕಾನೂನುಬದ್ಧ ಆಧಾರವನ್ನು ಒದಗಿಸುತ್ತದೆ.

  1. ನ್ಯಾಯಾಲಯಗಳ ಹಸ್ತಕ್ಷೇಪವಿಲ್ಲದೆ ‘ಕಾರ್ಯನಿರ್ವಹಿಸದ ಸ್ವತ್ತುಗಳನ್ನು’ ಪುನರ್ರಚಿಸಲು SARFAESI ಕಾಯಿದೆ ಸಹಾಯ ಮಾಡುತ್ತದೆ.
  2. ಅಂದಿನಿಂದ, ಈ ಕಾಯಿದೆಯಡಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಡಿಯಲ್ಲಿ ನೋಂದಾಯಿಸಲಾದ ಹೆಚ್ಚಿನ ಸಂಖ್ಯೆಯ ARC ಗಳನ್ನು ರಚಿಸಲಾಗಿದೆ. ಎಆರ್‌ಸಿಗಳನ್ನು ನಿಯಂತ್ರಿಸುವ ಅಧಿಕಾರ RBI ಗೆ ಇದೆ.

ARC ಗಳಿಗೆ ಬಂಡವಾಳದ ಅಗತ್ಯತೆ:

  1. 2016 ರಲ್ಲಿ SARFAESI ಕಾಯ್ದೆಯಲ್ಲಿ ಮಾಡಿದ ತಿದ್ದುಪಡಿಗಳ ಪ್ರಕಾರ, ಆಸ್ತಿ ಪುನರ್ರಚನೆ ಕಂಪನಿಯು (ARC) ಕನಿಷ್ಠ 2 ಕೋಟಿ ರೂ. ಮೊತ್ತದ ನಿವ್ವಳ ನಿಧಿಯನ್ನು ಹೊಂದಿರಬೇಕು.
  2. ಈ ಮೊತ್ತವನ್ನು ರಿಸರ್ವ್ ಬ್ಯಾಂಕ್ 2017 ರಲ್ಲಿ 100 ಕೋಟಿ ರೂ.ಗೆ ಹೆಚ್ಚಿಸಿದೆ. ಆಸ್ತಿ ಪುನರ್ರಚನೆ ಕಂಪನಿಯು ಅದರ ಅಪಾಯದ ತೂಕದ ಸ್ವತ್ತುಗಳು / ಸ್ವತ್ತುಗಳ 15% ನಷ್ಟು ಬಂಡವಾಳದ ಸಮರ್ಪಕ ಅನುಪಾತವನ್ನು ಸಹ ಕಾಯ್ದುಕೊಳ್ಳಬೇಕಾಗುತ್ತದೆ.

 

ವಿಷಯಗಳು:ಮೂಲಸೌಕರ್ಯ-ಇಂಧನ.

ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್:


(One Sun, One World, One Grid)

ಸಂದರ್ಭ:

COP26 ರ ಎರಡನೇ ದಿನದಂದು, ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ಸೌರ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ಗಡಿಗಳಾದ್ಯಂತ ಯಾವುದೇ ಅಡೆತಡೆಯಿಲ್ಲದೆ ಸಂಚರಿಸಲು ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್ (One Sun One World One Grid- OSOWOG) ಉಪಕ್ರಮವನ್ನು ಘೋಷಿಸಿದವು.

OSOWOG ಉಪಕ್ರಮದ ಬಗ್ಗೆ:

  1. ಈ ಉಪಕ್ರಮವು ಅಂತಾರಾಷ್ಟ್ರೀಯ ಸೌರ ಒಕ್ಕೂಟ ಮತ್ತು UKಯ ಹಸಿರು ಗ್ರಿಡ್ ಉಪಕ್ರಮವನ್ನು ಒಟ್ಟಿಗೆ ತರುತ್ತದೆ ಮತ್ತು ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಭಾರತದ ಪ್ರಯತ್ನವನ್ನು ಶ್ಲಾಘಿಸುಗಿಸುತ್ತದೆ.
  2. ಗ್ರಿಡ್ ಅನ್ನು ಮುಂದಿನ ಕೆಲವು ವರ್ಷಗಳಲ್ಲಿ ಅಂತರಾಷ್ಟ್ರೀಯ ಸೋರು ಒಕ್ಕೂಟದ ಮೂಲಕ (International Solar Alliance ISA) ಸ್ಥಾಪಿಸಲಾಗುವುದು, ಇದು ಆರಂಭದಲ್ಲಿ ವಿವಿಧ ದೇಶಗಳಿಗೆ ಸೌರ ಶಕ್ತಿಯನ್ನು ಪೂರೈಸಲು ಭಾರತದಿಂದ ರಚಿಸಲ್ಪಟ್ಟ ಮತ್ತೊಂದು ಉಪಕ್ರಮವಾಗಿದೆ.
  3. ಜಾಗತಿಕವಾಗಿ ಸೌರಶಕ್ತಿಯ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು, ಜಾಗತಿಕ ಸಹಕಾರವನ್ನು ಸುಲಭಗೊಳಿಸಲು ಭಾರತವು ‘ಒಂದು ಪ್ರಪಂಚ, ಒಂದು ಸೂರ್ಯ, ಒಂದು ಗ್ರಿಡ್’ (OSOWOG) ಉಪಕ್ರಮವನ್ನು ಪ್ರಸ್ತಾಪಿಸಿದೆ.
  4. ವಿವಿಧ ದೇಶಗಳಲ್ಲಿರುವ ನವೀಕರಿಸಬಹುದಾದ ಇಂಧನ ಮೂಲಗಳನ್ನು ಪರಸ್ಪರ ಸಂಪರ್ಕಿಸುವ ಮೂಲಕ ಜಾಗತಿಕ ಪರಿಸರ ವ್ಯವಸ್ಥೆಯನ್ನು ರಚಿಸುವುದು ಇದರ ಉದ್ದೇಶವಾಗಿದೆ.
  5. OSOWOG ಉಪಕ್ರಮದ ಹಿಂದಿನ ಆಲೋಚನೆಯು ‘ಸೂರ್ಯ ಎಂದಿಗೂ ಅಸ್ತನಾಗುವುದಿಲ್ಲ’ (The Sun Never Sets) ಮತ್ತು ಜಾಗತಿಕವಾಗಿ ಯಾವುದೇ ಭೌಗೋಳಿಕ ಸ್ಥಳದಲ್ಲಿ ನಿರ್ದಿಷ್ಟ ಸಮಯದಲ್ಲಿ ಸ್ಥಿರವಾಗಿರುತ್ತದೆ.

ಅನುಷ್ಠಾನ:

  1. ರಾಷ್ಟ್ರೀಯ ಗಡಿಗಳನ್ನು ದಾಟಿ ವಿಸ್ತರಿಸಿರುವ ಕಾಂಟಿನೆಂಟಲ್-ಸ್ಕೇಲ್ ಗ್ರಿಡ್‌ಗಳಿಂದ ಉತ್ತಮ-ಸಂಪರ್ಕಿತ ಸ್ಥಳಗಳಲ್ಲಿ ದೊಡ್ಡ ಸೌರ ವಿದ್ಯುತ್ ಕೇಂದ್ರಗಳು ಮತ್ತು ಗಾಳಿ ಫಾರ್ಮ್‌ಗಳ ನಿರ್ಮಾಣವನ್ನು ವೇಗಗೊಳಿಸಲು ಮಿನಿಸ್ಟ್ರಿಯಲ್ ಸ್ಟೀರಿಂಗ್ ಗ್ರೂಪ್ ಕೆಲಸ ಮಾಡುತ್ತದೆ.
  2. ಮಂತ್ರಿಗಳ ಸ್ಟೀರಿಂಗ್ ಗುಂಪು ಫ್ರಾನ್ಸ್, ಭಾರತ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ಒಳಗೊಂಡಿದೆ ಮತ್ತು ಆಫ್ರಿಕಾ, ಗಲ್ಫ್, ಲ್ಯಾಟಿನ್ ಅಮೇರಿಕಾ ಮತ್ತು ಆಗ್ನೇಯ ಏಷ್ಯಾದ ಪ್ರತಿನಿಧಿಗಳನ್ನು ಸಹ ಒಳಗೊಂಡಿರುತ್ತದೆ.

ವಿಶ್ವ ಗ್ರೀಡ್ ನ ಮಹತ್ವ:

ವಿಶ್ವಾದ್ಯಂತ ಗ್ರಿಡ್‌ನೊಂದಿಗೆ, ನಾವು ಎಲ್ಲೆಡೆ ಶುದ್ಧ ಶಕ್ತಿಯನ್ನು ಬಳಸಿಕೊಳ್ಳಬಹುದಾಗಿದೆ. ಇದು ಇಂಧನ ಸಂಗ್ರಹಣೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಸೌರ ಯೋಜನೆಗಳ ಕಾರ್ಯಸಾಧ್ಯತೆಯನ್ನು ಹೆಚ್ಚಿಸುತ್ತದೆ.

OSOWOG ಉಪಕ್ರಮದ ಅಡಿಯಲ್ಲಿನ ಸಂಭಾವ್ಯತೆ ಮತ್ತು ಪ್ರಯೋಜನಗಳು:

  1. ಭಾರತವು 2030 ರ ವೇಳೆಗೆ ಪಳೆಯುಳಿಕೆ ರಹಿತ ಇಂಧನಗಳಿಂದ 40% ರಷ್ಟು ಶಕ್ತಿಯನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ ಮತ್ತು ‘ಒಂದು ಜಗತ್ತು, ಒಂದು ಸೂರ್ಯ, ಒಂದು ಗ್ರಿಡ್’ (OSOWOG) ಮಂತ್ರವನ್ನು ನೀಡುವ ಮೂಲಕ ಸೌರಶಕ್ತಿ ಪೂರೈಕೆಯನ್ನು ಪರಸ್ಪರ ಸಂಪರ್ಕಿಸಲು ಭಾರತವು ಎಲ್ಲಾ ದೇಶಗಳಿಗೆ ಕರೆ ನೀಡಿದೆ.
  2. ಪ್ರಸ್ತಾವಿತ ಏಕೀಕರಣವು ಎಲ್ಲಾ ಭಾಗವಹಿಸುವ ಘಟಕಗಳಿಗೆ ಯೋಜನಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿನ ದಕ್ಷತೆ ಮತ್ತು ಸ್ವತ್ತುಗಳ ಅತ್ಯುತ್ತಮ ಬಳಕೆಯನ್ನು ಉತ್ತೇಜಿಸುತ್ತದೆ.
  3. ಯೋಜನೆಗೆ ಕೇವಲ ಹೆಚ್ಚುತ್ತಿರುವ ಹೂಡಿಕೆಯ ಅಗತ್ಯವಿರುತ್ತದೆ, ಕಾರಣ ಅಸ್ತಿತ್ವದಲ್ಲಿರುವ ಗ್ರಿಡ್ ಕ್ರಿಯಾಶೀಲವಾಗಿರುವುದರಿಂದ ಯೋಜನೆಗೆ ಹೊಸ ಸಮಾನಾಂತರ ಗ್ರಿಡ್ ಮೂಲಸೌಕರ್ಯ ಅಗತ್ಯವಿರುವುದಿಲ್ಲ.
  4. ನವೀಕರಿಸಬಹುದಾದ ಇಂಧನ ಮೂಲಗಳಲ್ಲಿ ಹೂಡಿಕೆಯನ್ನು ಆಕರ್ಷಿಸಲು ಭಾಗವಹಿಸುವ ಎಲ್ಲಾ ಘಟಕಗಳಿಗೆ ಕೌಶಲ್ಯ, ತಂತ್ರಜ್ಞಾನ ಮತ್ತು ಹಣಕಾಸು ಬಳಸಿಕೊಳ್ಳುವಲ್ಲಿ ಯೋಜನೆಯು ಸಹಾಯ ಮಾಡುತ್ತದೆ.
  5. ಈ ಯೋಜನೆಯಿಂದ ಉಂಟಾಗುವ ಆರ್ಥಿಕ ಪ್ರಯೋಜನಗಳು ಬಡತನವನ್ನು ನಿರ್ಮೂಲನೆ ಮಾಡಲು, ನೀರು, ನೈರ್ಮಲ್ಯ, ಆಹಾರ ಮತ್ತು ಇತರ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
  6. ಈ ಉಪಕ್ರಮವು ಭಾರತದಲ್ಲಿ ನೆಲೆಗೊಂಡಿರುವ ರಾಷ್ಟ್ರೀಯ ನವೀಕರಿಸಬಹುದಾದ ಇಂಧನ ನಿರ್ವಹಣಾ ಕೇಂದ್ರಗಳನ್ನು ಪ್ರಾದೇಶಿಕ ಮತ್ತು ಜಾಗತಿಕ ನಿರ್ವಹಣಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
  7. OSOWOG ಉಪಕ್ರಮವು 2050 ರ ವೇಳೆಗೆ ಜಾಗತಿಕವಾಗಿ ಸರಿಸುಮಾರು 2,600 GW ಅಂತರ್ಸಂಪರ್ಕ ಸಾಮರ್ಥ್ಯವನ್ನು ಸಕ್ರಿಯಗೊಳಿಸಬಹುದು, ಇದು ವರ್ಷಕ್ಕೆ 226 ಶತಕೋಟಿ ಯುರೋಗಳಷ್ಟು ಅಂದಾಜು ವಿದ್ಯುತ್ ಉಳಿತಾಯಕ್ಕೆ ಕಾರಣವಾಗುತ್ತದೆ.

 

ಒನ್ ಸನ್ ಘೋಷಣೆ:

OSOWOG ಉಪಕ್ರಮದ ಘೋಷಣೆಯು “ಒಂದು ಸೂರ್ಯ ಘೋಷಣೆ” ಯೊಂದಿಗೆ ಸೇರಿದೆ, ಇದು ಅಂತರ್ಸಂಪರ್ಕಿತ ಹಸಿರು ಗ್ರಿಡ್‌ಗಳ ಮೂಲಕ “ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್” ನ ದೃಷ್ಟಿ ರೂಪಾಂತರಗೊಳ್ಳಬೇಕು ಎಂದು ಹೇಳುತ್ತದೆ, ವಿನಾಶಕಾರಿ ಹವಾಮಾನ ಬದಲಾವಣೆಯನ್ನು ತಡೆಗಟ್ಟಲು, ಶುದ್ಧ ಶಕ್ತಿಯ ಪರಿವರ್ತನೆಯನ್ನು ವೇಗಗೊಳಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಪೂರೈಸಲು ಇದು ನಮಗೆಲ್ಲರಿಗೂ ಸಹಾಯ ಮಾಡುತ್ತದೆ.

  1. ಪ್ರಸ್ತುತ ಈ ಘೋಷಣೆಯನ್ನು ಅಂತರಾಷ್ಟ್ರೀಯ ಸೌರ ಒಕ್ಕೂಟದ 80 ಸದಸ್ಯ ರಾಷ್ಟ್ರಗಳು ಅನುಮೋದಿಸಿವೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಸ್ಥಿತಿಸ್ಥಾಪಕ ದ್ವೀಪ ರಾಜ್ಯಗಳಿಗೆ ಮೂಲಸೌಕರ್ಯ:


(Infrastructure for Resilient Island States)

ಸಂದರ್ಭ:

ಹವಾಮಾನ ಬದಲಾವಣೆಗೆ ಗುರಿಯಾಗುವ ಸಣ್ಣ ದ್ವೀಪ ರಾಜ್ಯಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಭಾರತವು ‘ಇನ್‌ಫ್ರಾಸ್ಟ್ರಕ್ಚರ್ ಫಾರ್ ರೆಸಿಲೆಂಟ್ ಐಲ್ಯಾಂಡ್ ಸ್ಟೇಟ್ಸ್ (IRIS)’ ಉಪಕ್ರಮವನ್ನು ಪ್ರಾರಂಭಿಸಿದೆ.

  1. ಈ ಹೊಸ ಉಪಕ್ರಮವು ಭಾರತ, ಯುಕೆ ಮತ್ತು ಆಸ್ಟ್ರೇಲಿಯಾ ನಡುವಿನ ಸಹಯೋಗದ ಫಲಿತಾಂಶವಾಗಿದೆ ಮತ್ತು ಫಿಜಿ, ಜಮೈಕಾ ಮತ್ತು ಮಾರಿಷಸ್‌ನಂತಹ ಸಣ್ಣ ದ್ವೀಪ ರಾಷ್ಟ್ರಗಳ ನಾಯಕರ ಭಾಗವಹಿಸುವಿಕೆಯನ್ನು ಹೊಂದಿದೆ.

ಅನುಷ್ಠಾನ:

ಸ್ಥಿತಿಸ್ಥಾಪಕ ದ್ವೀಪ ರಾಜ್ಯಗಳಿಗೆ ಮೂಲಸೌಕರ್ಯ’ (IRIS) ಉಪಕ್ರಮವು, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಅಂತರಾಷ್ಟ್ರೀಯ ಒಕ್ಕೂಟದ (Coalition for Disaster Resilient Infrastructure – CDRI) ಒಂದು ಭಾಗವಾಗಿದ್ದು, ವಿಶೇಷವಾಗಿ ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಮರ್ಥ್ಯ ನಿರ್ಮಾಣದ ಮೇಲೆ ಮತ್ತು ಪೈಲಟ್ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಅಗತ್ಯತೆ:

  1. ಅಭಿವೃದ್ಧಿ ಹೊಂದಿದ ದೇಶಗಳಾಗಲಿ ಅಥವಾ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ದೇಶಗಳಾಗಲಿ, ಹವಾಮಾನ ಬದಲಾವಣೆಯ ಕೋಪಕ್ಕೆ ಯಾರೂ ತುತ್ತಾಗದೆ ಇರಲು ಸಾಧ್ಯವಿಲ್ಲ ಎಂಬುದು ಕಳೆದ ಕೆಲವು ದಶಕಗಳಲ್ಲಿ ಸಾಬೀತಾಗಿದೆ. ಆದರೆ, ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ (Small Island Developing States – SIDS) ಹವಾಮಾನ ಬದಲಾವಣೆಯಿಂದ ದೊಡ್ಡ ಅಪಾಯವಿದೆ.
  2. ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳು (SIDS) ತಮ್ಮ ಇಡೀ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು, ಸಮುದ್ರ ಮಟ್ಟದಿಂದ ಐದು ಮೀಟರ್‌ಗಿಂತ ಕೆಳಗಿನ ಭೂಮಿಯಲ್ಲಿ ವಾಸಿಸುತ್ತಿದ್ದಾರೆ. ಇದರಿಂದಾಗಿ ಅವರು ಸಮುದ್ರ ಮಟ್ಟದ ಏರಿಕೆ ಚಂಡಮಾರುತಗಳ ಉಲ್ಬಣಗಳಿಗೆ ಮತ್ತು ಕರಾವಳಿ ನಾಶದಿಂದಾಗಿ ಹೆಚ್ಚು ತೊಂದರೆಗೆ ಒಳಪಡುತ್ತಾರೆ.
  3. ಈ ದೇಶಗಳು ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕೇವಲ 1 ಪ್ರತಿಶತವನ್ನು ಮಾತ್ರ ಕೊಡುಗೆ ನೀಡುತ್ತವೆ ಮತ್ತು ಅವು ಹವಾಮಾನ ಬದಲಾವಣೆಯ ಅತ್ಯಂತ ಹಾನಿಕಾರಕ ಪರಿಣಾಮಗಳನ್ನು ಎದುರಿಸುವಲ್ಲಿ ಮೊದಲಿಗರಾಗಿವೆ.
  4. ಹವಾಮಾನ ಬದಲಾವಣೆಯು ಜೀವನೋಪಾಯ ಮತ್ತು ಆರ್ಥಿಕ ಅಭಿವೃದ್ಧಿಗೆ ಧಕ್ಕೆ ತಂದಿರುವುದರಿಂದ ಕೃಷಿ ಉತ್ಪಾದನೆ, ಮೀನುಗಾರಿಕೆ ಮತ್ತು ಸಂಬಂಧಿತ ವಲಯಗಳು ಕ್ಷೀಣಿಸುತ್ತಿವೆ. ಇದರ ಜೊತೆಗೆ, ಹವಾಮಾನ ಬದಲಾವಣೆಯಿಂದ ಉಂಟಾಗುವ ತೀವ್ರ ಹವಾಮಾನವು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಭೂಮಿ, ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯವನ್ನು ನಾಶಪಡಿಸುತ್ತಿದೆ, ಆರ್ಥಿಕವಾಗಿ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ.

ಅಂತರಾಷ್ಟ್ರೀಯ ವಿಪತ್ತು ನಿರ್ವಹಣಾ ಮೂಲಸೌಕರ್ಯ ಒಕ್ಕೂಟ (CDRI)ದ ಕುರಿತು:

  1. ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್ ನಗರದಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಕ್ರಿಯೆ ಶೃಂಗಸಭೆ 2019 ರಲ್ಲಿ ಸಿಡಿಆರ್‌ಐ ಅನ್ನು ಭಾರತೀಯ ಪ್ರಧಾನ ಮಂತ್ರಿಯವರು ಪ್ರಾರಂಭಿಸಿದರು.
  2. ಇದು ಸ್ವಯಂಪ್ರೇರಿತ ಅಂತರರಾಷ್ಟ್ರೀಯ ಗುಂಪು.
  3. ಇದು ಮೂಲಸೌಕರ್ಯದ ವಿಪತ್ತು ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದ ವಿವಿಧ ಅಂಶಗಳ ಕುರಿತು ಮಾಹಿತಿಯನ್ನು ಉತ್ಪಾದಿಸುವ ಮತ್ತು ವಿನಿಮಯ ಮಾಡಿಕೊಳ್ಳುವ ವೇದಿಕೆಯಾಗಿದೆ.
  4. ಸರ್ಕಾರಗಳು, ವಿಶ್ವಸಂಸ್ಥೆಯ ಏಜೆನ್ಸಿಗಳು, ಬ್ಯಾಂಕ್‌ಗಳು, ಖಾಸಗಿ ವಲಯದ ಗುಂಪುಗಳು ಮತ್ತು ಅಕಾಡೆಮಿಯ ಸಹಯೋಗದೊಂದಿಗೆ ಹವಾಮಾನ ಮತ್ತು ವಿಪತ್ತು ಅಪಾಯಗಳಿಗೆ ಮೂಲಸೌಕರ್ಯ ವ್ಯವಸ್ಥೆಗಳಲ್ಲಿ ಸ್ಥಿತಿಸ್ಥಾಪಕತ್ವವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಇದು ಹೊಂದಿದೆ.
  5. ಇದರ ಅಡಿಯಲ್ಲಿ, ತಮ್ಮ ಅಪಾಯದ ಸಂದರ್ಭ ಮತ್ತು ಆರ್ಥಿಕ ಅಗತ್ಯಗಳಿಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಸಾಮರ್ಥ್ಯಗಳು ಮತ್ತು ವ್ಯವಸ್ಥೆಗಳನ್ನು ನವೀಕರಿಸಲು ಸದಸ್ಯ ರಾಷ್ಟ್ರಗಳಿಗೆ ಸಹಾಯ ಮಾಡಲು ಕಾರ್ಯವಿಧಾನವನ್ನು ರಚಿಸಲಾಗುತ್ತದೆ.
  6. ಇಲ್ಲಿಯವರೆಗೆ, ಜರ್ಮನಿ, ಇಟಲಿ, ಜಪಾನ್, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ 25 ಇತರ ದೇಶಗಳು ಈ ಒಕ್ಕೂಟಕ್ಕೆ ಸೇರಿಕೊಂಡಿವೆ.
  7. CDRI ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಭಾರತವು ಸ್ಥಾಪಿಸಿದ ಎರಡನೇ ಅಂತರರಾಷ್ಟ್ರೀಯ ಸಹಯೋಗವಾಗಿದೆ, ಇನ್ನೊಂದು ಅಂತರಾಷ್ಟ್ರೀಯ ಸೌರ ಒಕ್ಕೂಟವಾಗಿದ್ದು ಅದು ಈಗ “ಒಪ್ಪಂದ-ಆಧಾರಿತ” ಅಂತರಸರ್ಕಾರಿ ಸಂಸ್ಥೆಯ ಸ್ಥಾನಮಾನಕ್ಕೆ ವಿಕಸನಗೊಂಡಿದೆ.

ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳು:

  1. ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳು (SIDS), ವಿಶ್ವಸಂಸ್ಥೆಯ 38 ಸದಸ್ಯ ರಾಷ್ಟ್ರಗಳ ವಿಭಿನ್ನ ಗುಂಪು ಮತ್ತು UN ಪ್ರಾದೇಶಿಕ ಆಯೋಗಗಳ 20 UN ಅಲ್ಲದ ಸದಸ್ಯರು/ಅಸೋಸಿಯೇಟ್ ಸದಸ್ಯರು, ಅನನ್ಯ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ದುರ್ಬಲತೆಗಳನ್ನು ಎದುರಿಸುತ್ತಿದ್ದಾರೆ.
  2. ಜೂನ್ 1992 ರಲ್ಲಿ ನಡೆದ ಪರಿಸರ ಮತ್ತು ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳು (SIDS) ಅಭಿವೃದ್ಧಿಶೀಲ ರಾಷ್ಟ್ರಗಳ ಒಂದು ವಿಭಿನ್ನ ಗುಂಪು ಎಂದು ಗುರುತಿಸಲ್ಪಟ್ಟಿವೆ.
  3. ಜೂನ್ 2012 ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ‘ಯುನೈಟೆಡ್ ನೇಷನ್ಸ್ ಸಸ್ಟೈನಬಲ್ ಡೆವಲಪ್‌ಮೆಂಟ್ ಕಾನ್ಫರೆನ್ಸ್’ (ರಿಯೊ +20 ಎಂದೂ ಕರೆಯುತ್ತಾರೆ) ನಲ್ಲಿ ಅಳವಡಿಸಿಕೊಂಡ ದಿ ಫ್ಯೂಚರ್ ವಿ ವಾಂಟ್ ಎಂಬ ವಿಷಯವು ಅನನ್ಯ ಮತ್ತು ನಿರ್ದಿಷ್ಟ ದುರ್ಬಲತೆಗಳನ್ನು ಬಹಿರಂಗಪಡಿಸಿದೆ ಎಂದು ವಿವರಿಸುತ್ತದೆ.
  4. ‘ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳು’ ಕೆರಿಬಿಯನ್, ಪೆಸಿಫಿಕ್ ಮಹಾಸಾಗರ ಮತ್ತು AIS (ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರ) ಭೌಗೋಳಿಕ ಪ್ರದೇಶಗಳಲ್ಲಿ ನೆಲೆಗೊಂಡಿವೆ.
  5. ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ (SIDS) ಅವುಗಳ ಸುಸ್ಥಿರ ಅಭಿವೃದ್ಧಿ ಪ್ರಯತ್ನಗಳಲ್ಲಿ ಸಹಾಯ ಮಾಡಲು 1994 ರಲ್ಲಿ ಬಾರ್ಬಡೋಸ್ ಪ್ರೋಗ್ರಾಮ್ ಆಫ್ ಆಕ್ಷನ್ ಅನ್ನು ರಚಿಸಲಾಯಿತು.
  6. ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು,ಭೂ ಆವೃತ ಅಭಿವೃದ್ಧಿಶೀಲ ದೇಶಗಳು ಮತ್ತು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳನ್ನು (The United Nations Office of the High Representative for the Least Developed Countries, Landlocked Developing Countries and Small Island Developing States: UN-OHRLLS) ಯುನೈಟೆಡ್ ನೇಷನ್ಸ್ ಆಫೀಸ್ ಆಫ್ ದಿ ಹೈ ರೆಪ್ರೆಸೆಂಟೇಟಿವ್ ಈ ದೇಶಗಳ ಗುಂಪುಗಳನ್ನು ಪ್ರತಿನಿಧಿಸುತ್ತದೆ.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

‘ಪರಿಶಿಷ್ಟ ಬುಡಕಟ್ಟುಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳು (ಹಕ್ಕುಗಳ ಮಾನ್ಯತೆ / ಗುರುತಿಸುವಿಕೆ ಕಾಯಿದೆ)’:


(The ‘Scheduled Tribes and Other Traditional Forest Dwellers (Recognition of Rights Act)’

ಸಂದರ್ಭ:

ಭಾರತದ ರಾಷ್ಟ್ರಪತಿಗಳು,(ಸಂವಿಧಾನದ ಅನುಚ್ಛೇದ 239 ರ ಷರತ್ತು (1) ಅಡಿಯಲ್ಲಿ) ಪರಿಶಿಷ್ಟ ಬುಡಕಟ್ಟುಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳು (ಅರಣ್ಯ ಹಕ್ಕುಗಳ ಮಾನ್ಯತೆ / ಗುರುತಿಸುವಿಕೆ) ಕಾಯ್ದೆ, 2006’ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯೊಳಗೆ ರಾಜ್ಯ ಸರ್ಕಾರದ ಅಧಿಕಾರಗಳು ಮತ್ತು ಕಾರ್ಯಗಳನ್ನು ಚಲಾಯಿಸಲು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಅಧಿಕಾರ ನೀಡಿದ್ದಾರೆ.

ಅರಣ್ಯ ಹಕ್ಕುಗಳ ಕಾಯ್ದೆಯ ಕುರಿತು:

2006 ರಲ್ಲಿ ಅಂಗೀಕರಿಸಲ್ಪಟ್ಟ ಈ ಕಾಯಿದೆಯು ಸಾಂಪ್ರದಾಯಿಕ ಅರಣ್ಯವಾಸಿಗಳ ಹಕ್ಕುಗಳಿಗೆ ಕಾನೂನು ಮಾನ್ಯತೆಯನ್ನು ನೀಡುತ್ತದೆ.

ಕಾಯಿದೆಯಡಿ ನೀಡಲಾದ ಹಕ್ಕುಗಳು:

ಮಾಲೀಕತ್ವದ ಹಕ್ಕುಗಳು – ಡಿಸೆಂಬರ್ 13, 2005 ರವರೆಗೆ ಅರಣ್ಯವಾಸಿಗಳು ಅಥವಾ ಬುಡಕಟ್ಟು ಜನರು ಕೃಷಿ ಮಾಡುತ್ತಿರುವ ಭೂಮಿಯು 4 ಹೆಕ್ಟೇರ್ ಮೀರಬಾರದು; ಆ ದಿನಾಂಕದವರೆಗೆ ಕೃಷಿಯನ್ನು ಮಾಡುತ್ತಿರುವ ಸಂಬಂಧಪಟ್ಟ ಕುಟುಂಬಕ್ಕೆ ಭೂ ಮಾಲೀಕತ್ವದ ಹಕ್ಕುಗಳನ್ನು ನೀಡಲಾಗುವುದು. ಅಂದರೆ, ಬೇರೆ ಯಾವುದೇ ಹೊಸ ಭೂಮಿಯನ್ನು ಒದಗಿಸಲಾಗುವುದಿಲ್ಲ.

ಬಳಕೆ ಹಕ್ಕುಗಳು – ಅರಣ್ಯವಾಸಿಗಳು ಅಥವಾ ಬುಡಕಟ್ಟು ಜನಾಂಗದವರಿಗೆ, ಕಿರು ಅರಣ್ಯ ಉತ್ಪನ್ನಗಳು (ಮಾಲೀಕತ್ವ ಸೇರಿದಂತೆ), ದನಗಳನ್ನು ಮೇಯಿಸಲು ಹುಲ್ಲುಗಾವಲು ಪ್ರದೇಶ ಮತ್ತು ಗ್ರಾಮೀಣ ಮಾರ್ಗಗಳ ಬಗ್ಗೆ ಹಕ್ಕುಗಳು ಲಭ್ಯವಿರುತ್ತವೆ.

ಪರಿಹಾರ ಮತ್ತು ಅಭಿವೃದ್ಧಿ ಹಕ್ಕುಗಳು – ಅರಣ್ಯ ನಿವಾಸಿಗಳು ಅಥವಾ ಬುಡಕಟ್ಟು ಜನಾಂಗದವರ ಅಕ್ರಮ ಸ್ಥಳಾಂತರಿಸುವಿಕೆ ಅಥವಾ ಬಲವಂತದ ಸ್ಥಳಾಂತರದ ಸಂದರ್ಭದಲ್ಲಿ ಪುನರ್ವಸತಿ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಮತ್ತು ಅರಣ್ಯ ಸಂರಕ್ಷಣೆಯ ನಿರ್ಬಂಧಗಳಿಗೆ ಒಳಪಟ್ಟು ಮೂಲಭೂತ ಸೌಲಭ್ಯಗಳ ಹಕ್ಕನ್ನು ಹೊಂದಿರುತ್ತಾರೆ.

ಅರಣ್ಯ ನಿರ್ವಹಣಾ ಹಕ್ಕುಗಳು – ಕಾಡುಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸುವ ಹಕ್ಕುಗಳಿವೆ.

ಅರ್ಹತಾ ಮಾನದಂಡಗಳು:

ಅರಣ್ಯ ಹಕ್ಕುಗಳ ಕಾಯ್ದೆ (FRA) ಯ ಸೆಕ್ಷನ್ 2 (ಸಿ) ಪ್ರಕಾರ, ಅರಣ್ಯ ವಾಸದ ಪರಿಶಿಷ್ಟ ಪಂಗಡ (Forest Dwelling Scheduled Tribe – FDST) ವಾಗಿ ಅರ್ಹತೆ ಪಡೆಯಲು ಮತ್ತು FRA ಅಡಿಯಲ್ಲಿ ಹಕ್ಕುಗಳನ್ನು ಗುರುತಿಸಲು ಅರ್ಹರಾಗಲು, ಅರ್ಜಿದಾರನು ಈ ಕೆಳಗಿನ ಮೂರು ಷರತ್ತುಗಳನ್ನು  ಪೂರ್ಣಗೊಳಿಸಬೇಕಾದುದು ಅಗತ್ಯವಾಗಿದೆ.

ವೈಯಕ್ತಿಕ ಅಥವಾ ಸಮುದಾಯ;

  1. ಹಕ್ಕು ಪಡೆಯುವ ಪ್ರದೇಶದಲ್ಲಿ ಪರಿಶಿಷ್ಟ ಪಂಗಡದ ಸದಸ್ಯರಾಗಿರಬೇಕು;
  2. 13-12-2005ರ ಮೊದಲು ಮೂಲತಃ ಅರಣ್ಯ ಅಥವಾ ಅರಣ್ಯ ಭೂಮಿಯ ನಿವಾಸಿಯಾಗಿರಬೇಕು;
  3. ಅವರು ನಿಜವಾಗಿಯೂ ಜೀವನೋಪಾಯಕ್ಕಾಗಿ ಅರಣ್ಯ ಅಥವಾ ಅರಣ್ಯ ಭೂಮಿಯನ್ನು ಅವಲಂಬಿಸಿರಬೇಕು.
  4. ಮತ್ತು, ಇತರ ಸಾಂಪ್ರದಾಯಿಕ ಅರಣ್ಯವಾಸಿ (Other Traditional Forest Dweller -OTFD) ಯಾಗಿ ಅರ್ಹತೆ ಪಡೆಯಲು ಮತ್ತು ಎಫ್‌ಆರ್‌ಎ ಅಡಿಯಲ್ಲಿ ಹಕ್ಕುಗಳನ್ನು ಗುರುತಿಸಲು ಅರ್ಹರಾಗಲು, ಈ ಕೆಳಗಿನ ಎರಡು ಷರತ್ತುಗಳನ್ನು ಪೂರೈಸಬೇಕು:

ವೈಯಕ್ತಿಕ ಅಥವಾ ಸಮುದಾಯ;

  1. ಡಿಸೆಂಬರ್ 13, 2005 ರ ಮೊದಲು ಕನಿಷ್ಠ ಮೂರು ತಲೆಮಾರುಗಳವರೆಗೆ (75 ವರ್ಷಗಳು) ಅರಣ್ಯ ಅಥವಾ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವವರಾಗಿರಬೇಕು.
  2. ಜೀವನೋಪಾಯಕ್ಕಾಗಿ ನಿಜವಾಗಿಯೂ ಅರಣ್ಯ ಅಥವಾ ಅರಣ್ಯ ಭೂಮಿಯನ್ನು ಅವಲಂಬಿಸಿರಬೇಕು.

ಹಕ್ಕುಗಳಿಗೆ ಮಾನ್ಯತೆ ನೀಡುವ ವಿಧಾನ:

  1. ಗ್ರಾಮ ಸಭೆಯಿಂದ ನಿರ್ಣಯವನ್ನು ಅಂಗೀಕರಿಸಲಾಗುವುದು,ಇದರಲ್ಲಿ,ಯಾವ ಸಂಪನ್ಮೂಲಗಳ ಮೇಲೆ ಯಾರ ಹಕ್ಕುಗಳನ್ನು ಗುರುತಿಸಬೇಕು ಎಂಬುದರ ಕುರಿತು ಶಿಫಾರಸುಗಳನ್ನು ಮಾಡಲಾಗುತ್ತದೆ.
  2. ಅದರ ನಂತರ, ಪ್ರಸ್ತಾವನೆಯನ್ನು ಉಪವಿಭಾಗ (ಅಥವಾ ತಾಲ್ಲೂಕು) ಮಟ್ಟದಲ್ಲಿ ಮತ್ತು ನಂತರ ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಅನುಮೋದಿಸಲಾಗುತ್ತದೆ.

ಈ ಸ್ಕ್ರೀನಿಂಗ್ ಸಮಿತಿಗಳು ಅರಣ್ಯ, ಕಂದಾಯ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಗಳ ಮೂವರು ಸರ್ಕಾರಿ ಅಧಿಕಾರಿಗಳು ಮತ್ತು ಆ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಯ ಚುನಾಯಿತ ಮೂವರು ಸದಸ್ಯರನ್ನು ಒಳಗೊಂಡಿವೆ. ಈ ಸಮಿತಿಗಳು ಅರಣ್ಯ ಹಕ್ಕುಗಳ ಮಾನ್ಯತೆಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಸಹ ಕೇಳುತ್ತವೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


J&K ನಲ್ಲಿ ಭಯೋತ್ಪಾದನಾ ನಿಗ್ರಹ ದಳದ ಸ್ಥಾಪನೆ:

  1. ಜಮ್ಮು ಮತ್ತು ಕಾಶ್ಮೀರ ಸರ್ಕಾರವು,“ಕೇಂದ್ರಾಡಳಿತ ಪ್ರದೇಶದಲ್ಲಿನ ಉಗ್ರಗಾಮಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ಮತ್ತು ಪರಿಣಾಮಕಾರಿ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ” ಹೊಸ ‘ರಾಜ್ಯ ತನಿಖಾ ದಳ’ (State Investigation Agency – SIA) ವನ್ನು ಸ್ಥಾಪಿಸಿದೆ.
  2. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಇತರ ಕೇಂದ್ರೀಯ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸಲು SIA ಒಂದು ನೋಡಲ್ ಏಜೆನ್ಸಿಯಾಗಿರುತ್ತದೆ.
  3. CID ವಿಭಾಗದ ಮುಖ್ಯಸ್ಥರು ‘ರಾಜ್ಯ ತನಿಖಾ ಸಂಸ್ಥೆ’ಯ (SIA) ಪದನಿಮಿತ್ತ ನಿರ್ದೇಶಕರಾಗಿರುತ್ತಾರೆ.

 

ರಕ್ಷಣಾ ಖರೀದಿ ಸಮಿತಿ (DAC):

(Defence Acquisitions Council -DAC)

ಭ್ರಷ್ಟಾಚಾರವನ್ನು ನಿಗ್ರಹಿಸಲು ಮತ್ತು ಶಸ್ತ್ರಾಸ್ತ್ರ ಖರೀದಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ತ್ವರಿತ ಗೊಳಿಸಲು ಭಾರತ ಸರ್ಕಾರವು 2001 ರಲ್ಲಿ, ಸಮಗ್ರ ರಕ್ಷಣಾ ಖರೀದಿ ಸಮಿತಿಯನ್ನು ಸ್ಥಾಪಿಸಿತು.

ಇದರ ಮುಖ್ಯಸ್ಥರು ದೇಶದ ರಕ್ಷಣಾ ಮಂತ್ರಿಗಳು ಆಗಿರುತ್ತಾರೆ.

ಉದ್ದೇಶ:

ನಿಗದಿಪಡಿಸಿದ ಬಜೆಟ್ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಮೂಲಕ, ಸಮಯದ ಚೌಕಟ್ಟಿನಲ್ಲಿ ಸಶಸ್ತ್ರ ಪಡೆಗಳ ಅನುಮೋದಿತ ಅವಶ್ಯಕತೆಗಳನ್ನು ತ್ವರಿತವಾಗಿ ಖರೀದಿಸುವುದನ್ನು ಖಚಿತಪಡಿಸುವುದು  DACಯ ಉದ್ದೇಶವಾಗಿದೆ.

ಕಾರ್ಯಗಳು:

ದೀರ್ಘಕಾಲೀನ ಖರೀದಿ ಯೋಜನೆಗಳ ಆಧಾರದ ಮೇಲೆ ಸ್ವಾಧೀನಕ್ಕಾಗಿ ನೀತಿ ಮಾರ್ಗಸೂಚಿಗಳನ್ನು ಒದಗಿಸುವ ಜವಾಬ್ದಾರಿಯನ್ನು ಡಿಎಸಿ ಹೊಂದಿದೆ. ಇದರಲ್ಲಿ ಆಮದು ಮಾಡಿಕೊಳ್ಳುವ ಮತ್ತು ದೇಶಿಯ ತಂತ್ರಜ್ಞಾನವನ್ನು ಬಳಸಿ ಉತ್ಪಾದಿಸುವ ಅಥವಾ ವಿದೇಶಿ ಪರವಾನಗಿಗಳ ಅಡಿಯಲ್ಲಿ ಸ್ಥಳೀಯವಾಗಿಯೇ ಉತ್ಪಾದಿಸಲಾಗುವ ಎಲ್ಲಾ ರೀತಿಯ  ಶಸ್ತ್ರಾಸ್ತ್ರ ಖರೀದಿಯನ್ನು ಅನುಮೋದಿಸುತ್ತದೆ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment