[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 22ನೇ ಅಕ್ಟೋಬರ್ 2021 – INSIGHTSIAS

[ad_1]

[Mission 2022] ದೈನಂದಿನ ಪ್ರಚಲಿತ ಘಟನೆಗಳು.

 

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಲಾ ನೀನಾ ಎಂದರೇನು?

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಕೋವಾಕ್ಸಿನ್ ಇನ್ನೂ ಏಕೆ WHO ದ ತುರ್ತು ಅನುಮೋದನೆಯನ್ನು ಪಡೆದಿಲ್ಲ?

2. FATF ನ “ಗ್ರೇ ಲಿಸ್ಟ್” ನಲ್ಲಿಯೇ ಉಳಿಯಲಿರುವ ಪಾಕಿಸ್ತಾನ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಭಾರತ್ ನೆಟ್ ಯೋಜನೆ.

2. ಉಡಾನ್ ಯೋಜನೆ.

3. ಭಾರತದ ಪಳೆಯುಳಿಕೆ ಇಂಧನ ಉತ್ಪಾದನೆಯು ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಮೀರಿದೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಜಿಯೋರಿಸ್ಸ ಮಾಸ್ಮಾಯೆನ್ಸಿಸ್.

2. ಸಖರೋವ್ ಪ್ರಶಸ್ತಿ.

3. ಮಾಸ್ಟಿಟಿಸ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

ಲಾ ನೀನಾ ಎಂದರೇನು?


(What is La Niña?)

ಸಂದರ್ಭ:

‘ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ’ (National Oceanic and Atmospheric Administration – NOAA) ಇತ್ತೀಚೆಗೆ ಘೋಷಿಸಿದ ಪ್ರಕಾರ, ಪೆಸಿಫಿಕ್ ಸಾಗರದಲ್ಲಿ ಲಾ ನೀನಾ’ (La Niña) ಪರಿಸ್ಥಿತಿ ಮತ್ತೆ ಅಭಿವೃದ್ಧಿಗೊಂಡಿದೆ.

  1. ಎಲ್ ನಿನೋ ಸದರ್ನ್ ಆಸಿಲೇಷನ್ (ENSO) ನ ತಟಸ್ಥ ಸ್ಥಾನದೊಂದಿಗೆ ಲಾ ನೀನಾ ವಿದ್ಯಮಾನಗಳು ನಿರಂತರವಾಗಿ ಬೆಳೆಯುವುದು ಸಾಮಾನ್ಯವಲ್ಲ,ಮತ್ತು ಈ ಸ್ಥಿತಿಯನ್ನು ಡಬಲ್-ಡಿಪ್ಎಂದು ಕರೆಯಲಾಗುತ್ತದೆ.

ಹಿನ್ನೆಲೆ:

‘ಎಲ್ ನಿನೋ’ (El Niño) ಮತ್ತು ಲಾ ನೀನಾ (La Niña)  ವಿದ್ಯಮಾನಗಳು ‘ಎಲ್ ನಿನೋ ಸದರ್ನ್ ಆಸಿಲೇಷನ್ (El Nino Southern Oscillation – ENSO)’ ಚಕ್ರದ ಒಂದು ಭಾಗವಾಗಿದೆ.

  1. 2020 ರಲ್ಲಿ, ಲಾ ನಿಯಾ ಪರಿಸ್ಥಿತಿಗಳು ಆಗಸ್ಟ್ ತಿಂಗಳಲ್ಲಿ ಅಭಿವೃದ್ಧಿಗೊಂಡವು ಮತ್ತು ನಂತರ ಏಪ್ರಿಲ್ 2021 ರಲ್ಲಿ ENSO- ತಟಸ್ಥ ಪರಿಸ್ಥಿತಿಗಳು (ENSO-neutral conditions) ಅಭಿವೃದ್ಧಿಗೊಂಡಾಗ ಕೊನೆಗೊಂಡಿತು.
  2. ಮುಂಬರುವ ಚಳಿಗಾಲದ ಅವಧಿಯಲ್ಲಿ ಡಿಸೆಂಬರ್ 2021 ರಿಂದ ಫೆಬ್ರವರಿ 2022 ರವರೆಗೆ ‘ಲಾ ನಿನಾ’ ವಿದ್ಯಮಾನವು ಮರುಕಳಿಸುವ ಸಂಭವನೀಯತೆಯು 87% ಇದೆ.

‘ಎಲ್ ನಿನೊ’ ಮತ್ತು ‘ಲಾ ನಿನಾ’ ಎಂದರೇನು?

‘ಎಲ್ ನಿನೋ’ (El Niño) ಮತ್ತು ‘ಲಾ ನಿನಾ’ (La Niña) ಉಷ್ಣವಲಯದ ಪೆಸಿಫಿಕ್ ಸಾಗರದಲ್ಲಿ ಸಂಭವಿಸುವ ಎರಡು ನೈಸರ್ಗಿಕ ಹವಾಮಾನ ವಿದ್ಯಮಾನಗಳು ಮತ್ತು ಅವು ಪ್ರಪಂಚದಾದ್ಯಂತ ಹವಾಮಾನ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತವೆ.

  1. ‘ಎಲ್ ನಿನೋ’ ವಿದ್ಯಮಾನದ ಸಮಯದಲ್ಲಿ, ‘ಮಧ್ಯ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಸಾಗರ’ ದಲ್ಲಿ ಮೇಲ್ಮೈ ತಾಪಮಾನ ಏರುತ್ತದೆ, ಮತ್ತು ‘ಲಾ ನಿನಾ’ ಪರಿಸ್ಥಿತಿಗಳಲ್ಲಿ, ಪೂರ್ವ ಪೆಸಿಫಿಕ್ ಸಾಗರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗುತ್ತದೆ.
  2. ಒಟ್ಟಾಗಿ, ಈ ಎರಡು ವಿದ್ಯಮಾನಗಳನ್ನುENSO’ ಅಥವಾ ‘El Nio Southern Oscillation’ ಎಂದು ಕರೆಯಲಾಗುತ್ತದೆ.

 

‘ಎಲ್ ನಿನೋ’ ವಿದ್ಯಮಾನದ ಮೂಲ:

  1. ಹವಾಮಾನ ಮಾದರಿಯಲ್ಲಿ (Climate Pattern) ಅಸಂಗತತೆ ಉಂಟಾದಾಗ ಎಲ್ ನಿನೋ ಪರಿಸ್ಥಿತಿಗಳು ಸೃಷ್ಟಿಯಾಗುತ್ತವೆ.
  2. ಸಮಭಾಜಕವನ್ನು ಸಮೀಪಿಸುತ್ತಿದ್ದಂತೆ ಪಶ್ಚಿಮ ದಿಕ್ಕಿನ ವ್ಯಾಪಾರ ಮಾರುತಗಳು ದುರ್ಬಲಗೊಳ್ಳುತ್ತವೆ ಮತ್ತು ಇದರ ಪರಿಣಾಮವಾಗಿ, ವಾಯು ಒತ್ತಡದಲ್ಲಿನ ಬದಲಾವಣೆಯಿಂದಾಗಿ, ಮೇಲ್ಮೈ ನೀರು ಪೂರ್ವದಿಂದ ದಕ್ಷಿಣ ಅಮೆರಿಕಾದ ಉತ್ತರದ ತೀರಕ್ಕೆ ಹರಿಯಲು ಪ್ರಾರಂಭಿಸುತ್ತದೆ.
  3. ಮಧ್ಯ ಮತ್ತು ಪೂರ್ವ ಪೆಸಿಫಿಕ್ ಸಾಗರ ಪ್ರದೇಶವು,  ಆರು ತಿಂಗಳುಗಳಿಗಿಂತ ಹೆಚ್ಚು ಕಾಲ ಬೆಚ್ಚಗಿರುತ್ತದೆ ಮತ್ತು ಇದರ ಪರಿಣಾಮವಾಗಿ ‘ಎಲ್ ನಿನೋ’ ಪರಿಸ್ಥಿತಿಗಳು ಉದ್ಭವಿಸುತ್ತವೆ.

El_nino

ಲಾ ನಿನಾದಿಂದಾಗಿ ಹವಾಮಾನದಲ್ಲಿನ ಬದಲಾವಣೆಗಳು:

  1. ಲಾ ನೀನಾದ ಕಾರಣ, ಹಾರ್ನ್ ಆಫ್ ಆಫ್ರಿಕಾ ಮತ್ತು ಮಧ್ಯ ಏಷ್ಯಾದಲ್ಲಿ ಸರಾಸರಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತದೆ.
  2. ಪೂರ್ವ ಆಫ್ರಿಕಾವು ಸಾಮಾನ್ಯ ಪರಿಸ್ಥಿತಿಗಳಿಗಿಂತ ಹೆಚ್ಚು ಬರವನ್ನು ಎದುರಿಸಬಹುದಾಗಿದ್ದು, ಈ ಪ್ರದೇಶದಲ್ಲಿ ಮರುಭೂಮಿ ಮಿಡತೆ ದಾಳಿಯಿಂದಾಗಿ ಪ್ರಾದೇಶಿಕ ಆಹಾರದ ಭದ್ರತೆಯ ಮೇಲೆ ಭೀಕರ ಪರಿಣಾಮ ಬೀರುವ ಸಾಧ್ಯತೆಯಿದೆ.
  3. ಲಾ ನೀನಾ ಆಗಮನದೊಂದಿಗೆ, ದಕ್ಷಿಣ ಆಫ್ರಿಕಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಬಹುದು.
  4. ಇದು ನೈರುತ್ಯ ಹಿಂದೂ ಮಹಾಸಾಗರದ ಉಷ್ಣವಲಯದ ಚಂಡಮಾರುತಗಳ ಋತುವಿನ ಮೇಲೆ ವ್ಯಾಪಕವಾಗಿ ಪರಿಣಾಮ ಬೀರುತ್ತದೆ ಮತ್ತು ಚಂಡಮಾರುತದ ತೀವ್ರತೆಯನ್ನು ಕಡಿಮೆ ಮಾಡಲು ಕಾರಣವಾಗಬಹುದು.
  5. ಇದು ಆಗ್ನೇಯ ಏಷ್ಯಾ, ಕೆಲವು ಪೆಸಿಫಿಕ್ ದ್ವೀಪ ಸಮೂಹಗಳು ಮತ್ತು ದಕ್ಷಿಣ ಅಮೆರಿಕದ ಉತ್ತರ ಪ್ರದೇಶದಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯನ್ನು ತರುವ ನಿರೀಕ್ಷೆಯಿದೆ.
  6. ಲಾ ನಿನಾದ ಆಗಮನದೊಂದಿಗೆ, ಭಾರತವು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತದೆ, ಇದು ದೇಶದ ವಿವಿಧ ಭಾಗಗಳಲ್ಲಿ ಪ್ರವಾಹದ ತೀವ್ರತೆಯನ್ನು ಹೆಚ್ಚಿಸುತ್ತದೆ.

current affairs

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಕೋವಾಕ್ಸಿನ್ ಇನ್ನೂ ಏಕೆ  WHO ದ ತುರ್ತು ಅನುಮೋದನೆಯನ್ನು ಪಡೆದಿಲ್ಲ?


(Why Covaxin is yet to win WHO’s emergency approval?)

ಸಂದರ್ಭ:

ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ ಕೋವಿಡ್ -19 ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಪೂರ್ವ-ಅರ್ಹತೆ’(pre-qualification) ಅಥವಾ ತುರ್ತು ಬಳಕೆಯ ಪಟ್ಟಿ (Emergency Use Listing – EUL)ಅನುಮೋದನೆ ಪ್ರಕ್ರಿಯೆಯು ನಿಯಮಿತ ಕಾರ್ಯವಿಧಾನದ ಪ್ರಕಾರ, ಮುನ್ನಡೆಯುತ್ತಿದೆ ಮತ್ತು ಪ್ರಕ್ರಿಯೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಭಾರತ ಸರ್ಕಾರದ ಆತುರವು ಆಪಾದಿತ ವಿಳಂಬದ ಬಗ್ಗೆ ಊಹಾಪೋಹಗಳನ್ನು ಮಾತ್ರ ಸೇರಿಸುತ್ತಿದೆ.

ಏನಿದು ಪ್ರಕರಣ?

ಭಾರತದ ಸ್ಥಳೀಯ ಲಸಿಕೆ ‘ಕೋವಾಕ್ಸಿನ್’ ಗಾಗಿ ‘ತುರ್ತು ಬಳಕೆಯ ಹಕ್ಕುಗಳನ್ನು’ ಪಡೆಯುವಲ್ಲಿ ವಿಳಂಬವಾಗುತ್ತಿದೆ ಏಕೆಂದರೆ WHO ನಿಂದ  ‘ಕೋವಾಕ್ಸಿನ್’ ಕುರಿತು ಇನ್ನೂ ಕೆಲವು ಪ್ರಶ್ನೆಗಳನ್ನು ಎತ್ತಲಾಗಿದೆ ಮತ್ತು ಸ್ಪಷ್ಟೀಕರಣಕ್ಕಾಗಿ ಈ ಪ್ರಶ್ನೆಗಳನ್ನು ಭಾರತ್ ಬಯೋಟೆಕ್‌ಗೆ ಕಳುಹಿಸಲಾಗಿದೆ.

  1. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಲಸಿಕೆಯನ್ನು ಮೌಲ್ಯಮಾಪನ ಮಾಡುವ ಮೊದಲು, ‘ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ’ ಯಿಂದ ಹೆಚ್ಚುವರಿ ಮಾಹಿತಿಗಾಗಿ ಕಾಯಲಾಗುತ್ತಿದೆ.

WHO ಅನುಮೋದನೆಯ ಅಗತ್ಯತೆ:

‘ಭಾರತ್ ಬಯೋಟೆಕ್’ ತಯಾರಿಸಿದ ‘ಕೊವಾಕ್ಸಿನ್’ ಲಸಿಕೆಯು  ‘ವಿಶ್ವ ಆರೋಗ್ಯ ಸಂಸ್ಥೆ’ಯ  ‘ಪೂರ್ವ-ಅರ್ಹತೆ’ ಅಥವಾ ‘ತುರ್ತು ಬಳಕೆಯ ಪಟ್ಟಿ’ (ಇಯುಎಲ್) ಅನುಮೋದನೆಯನ್ನು ಪಡೆದ ನಂತರ, ಈ ಲಸಿಕೆಯನ್ನು ಹಾಕಿಸಿಕೊಂಡ ವ್ಯಕ್ತಿಗಳಿಗೆ ಯಾವ ದೇಶದಲ್ಲಿ ಸಂಪೂರ್ಣವಾಗಿ ಲಸಿಕಾಕರಣಕ್ಕೆ ಒಳಪಟ್ಟ ಜನರಿಗೆ ಮಾತ್ರ ದೇಶವನ್ನು ಪ್ರವೇಶಿಸಲು ಅವಕಾಶವಿದೆಯೋ ಆ ದೇಶಗಳಿಗೆ ಪ್ರಯಾಣಿಸಲು ಅವಕಾಶವಿರುತ್ತದೆ.

ಇದರ ಹೊರತಾಗಿ, WHO ನ ಅನುಮತಿಯನ್ನು ಪಡೆದ ನಂತರ, ‘ಭಾರತ್ ಬಯೋಟೆಕ್’ ತನ್ನ ಲಸಿಕೆಯನ್ನು WHO ಅನುಮೋದಿತ ಲಸಿಕೆಗಳನ್ನು ಮಾತ್ರ ಬಳಸುತ್ತಿರುವ  ದೇಶಗಳಿಗೆ ರಫ್ತು ಮಾಡಬಹುದಾಗಿದೆ.

ಹಿನ್ನೆಲೆ:

ಯಾವುದೇ ಲಸಿಕೆ ಉತ್ಪಾದನಾ ಕಂಪನಿಯು ‘ಕೋವಾಕ್ಸ್’ (COVAX) ಅಥವಾ ‘ಇಂಟರ್ನ್ಯಾಷನಲ್ ಪ್ರೊಕ್ಯೂರ್ಮೆಂಟ್’ (International Procurement) ನಂತಹ ಜಾಗತಿಕ ಸೌಲಭ್ಯಗಳಿಗೆ ಲಸಿಕೆಗಳನ್ನು ಪೂರೈಸಲು, ಆ ಲಸಿಕೆಗಳು ವಿಶ್ವ ಆರೋಗ್ಯ ಸಂಸ್ಥೆ (WHO) ಯ‘ಪೂರ್ವ ಅರ್ಹತೆಗೆ’ ಒಳಪಟ್ಟಿರಬೇಕು ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ (Emergency Use Listing – EUL)’ ಯಲ್ಲಿ ಸೇರಿರುವುದು ಕಡ್ಡಾಯವಾಗಿದೆ.

  1. ಇದುವರೆಗೆ ಎಂಟು ಲಸಿಕೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ’ (EUL) ಗೆ ಸೇರಿಸಲಾಗಿದೆ.
  2. ‘ಭಾರತ್ ಬಯೋಟೆಕ್’ ತಯಾರಿಸಿದ ‘ಕೋವಾಕ್ಸಿನ್’ ಅನ್ನು EUL ಪಟ್ಟಿಯಲ್ಲಿ ಸೇರಿಸುವ ಬಗ್ಗೆ WHO ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ.

WHO ತುರ್ತು ಬಳಕೆ ಪಟ್ಟಿ (EUL) ಬಗ್ಗೆ:

ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ- EUL’, ಎನ್ನುವುದು, ಪರವಾನಗಿ ಪಡೆಯದ ಲಸಿಕೆಗಳು, ಚಿಕಿತ್ಸಕ ವಿಧಾನಗಳು (Therapeutics) ಮತ್ತು ದೇಹದ ಹೊರಗೆ ‘ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್’(in vitro diagnostics)  ಅನ್ನು ನಿರ್ಣಯಿಸಿ ಪಟ್ಟಿ ಮಾಡಲು ಅಪಾಯ ಆಧಾರಿತ ಕಾರ್ಯವಿಧಾನವಾಗಿದೆ. ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಿಂದ ಬಳಲುತ್ತಿರುವ ಜನರಿಗೆ ಈ ಉತ್ಪನ್ನಗಳನ್ನು ಒದಗಿಸುವ ಪ್ರಕ್ರಿಯೆಯನ್ನು ತ್ವರಿತ ಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

  1. ಲಭ್ಯವಿರುವ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಮತ್ತು ಕಾರ್ಯಕ್ಷಮತೆಯ ದತ್ತಾಂಶದ ಆಧಾರದ ಮೇಲೆ ನಿರ್ದಿಷ್ಟ ಉತ್ಪನ್ನಗಳನ್ನು ಬಳಸುವ ಸ್ವೀಕಾರಾರ್ಹತೆಯನ್ನು ನಿರ್ಧರಿಸಲು ಈ ಪಟ್ಟಿಯು ವಿಶ್ವಸಂಸ್ಥೆಯ ಆಸಕ್ತ ಖರೀದಿ ಏಜೆನ್ಸಿಗಳು ಮತ್ತು ಸದಸ್ಯ ರಾಷ್ಟ್ರಗಳಿಗೆ ಸಹಾಯ ಮಾಡುತ್ತದೆ.

 

‘ತುರ್ತು ಬಳಕೆ ಪಟ್ಟಿಗೆ’ ಸೇರ್ಪಡೆಗೊಳ್ಳುವದರಿಂದ ಆಗುವ ಪ್ರಯೋಜನಗಳು:

ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ (Emergency Use Listing- EUL)’ ಯಲ್ಲಿ ಕೋವಾಕ್ಸಿನ್ ಅನ್ನು ಪರಿಚಯಿಸುವುದರಿಂದ ಭಾರತವು ಅಭಿವೃದ್ಧಿಪಡಿಸಿದ ಮತ್ತು ಉತ್ಪಾದಿಸುವ ಲಸಿಕೆಗೆ ಸಾಕಷ್ಟು ಉತ್ತೇಜನ ಸಿಗುತ್ತದೆ, ಮತ್ತು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡ ಭಾರತದ ಮೊದಲ ಲಸಿಕೆ ಎಂಬ ಹೆಗ್ಗಳಿಕೆ ಇದರದಾಗುತ್ತದೆ.

ಕ್ಯಾಂಡಿಡೇಟ್ ಉತ್ಪನ್ನಗಳ ಅರ್ಹತೆ:

  1. ‘ತುರ್ತು ಬಳಕೆ ಪಟ್ಟಿ’ (EUL)ಯು ಮೂರು ಉತ್ಪನ್ನಗಳೊಂದಿಗೆ (ಲಸಿಕೆ, ಚಿಕಿತ್ಸಕ ಮತ್ತು ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್) ವ್ಯವಹರಿಸುತ್ತದೆ.
  2. ‘ತುರ್ತು ಬಳಕೆ ಪಟ್ಟಿ’ ಪ್ರಕ್ರಿಯೆಯ ಅಡಿಯಲ್ಲಿ ಮೌಲ್ಯಮಾಪನಕ್ಕೆ ಅರ್ಹತೆ ಪಡೆಯಲು ಈ ಪ್ರತಿಯೊಂದು ವಿಭಾಗಗಳಿಗೆ ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ಇದಕ್ಕಾಗಿ ಈ ಕೆಳಗಿನ ಮಾನದಂಡಗಳನ್ನು ಪೂರೈಸುವುದು ಅವಶ್ಯಕ:

  1. ‘ತುರ್ತು ಬಳಕೆಯ ಪಟ್ಟಿಯಲ್ಲಿ’ ಉತ್ಪನ್ನವನ್ನು ಸೇರಿಸಲು ಅನ್ವಯಿಸಲಾದ ರೋಗವು ಒಂದು ಗಂಭೀರ ರೋಗ, ತಕ್ಷಣದ ಮಾರಣಾಂತಿಕ, ಏಕಾಏಕಿ, ಸಾಂಕ್ರಾಮಿಕ ರೋಗ ಅಥವಾ ಸಾಂಕ್ರಾಮಿಕ ರೋಗವನ್ನು ಹರಡುವ ಸಾಮರ್ಥ್ಯವನ್ನು ಹೊಂದಿರಬೇಕು. ಹೆಚ್ಚುವರಿಯಾಗಿ, ರೋಗವು ವ್ಯವಹರಿಸುವಂತಹ ‘ತುರ್ತು ಬಳಕೆ ಪಟ್ಟಿ’ ಮೌಲ್ಯಮಾಪನಕ್ಕೆ ಪರಿಗಣಿಸಲು ಉತ್ಪನ್ನವು ಸಮಂಜಸವಾದ ಆಧಾರವನ್ನು ಹೊಂದಿರಬೇಕು, ಉದಾ, ಜನಸಂಖ್ಯೆಯ ಯಾವುದೇ ಉಪವಿಭಾಗಕ್ಕೆ (ಉದಾ., ಮಕ್ಕಳು) ಯಾವುದೇ ಪರವಾನಗಿ ಪಡೆದ ಉತ್ಪನ್ನಗಳು ಲಭ್ಯವಿಲ್ಲ.
  2. ಅಸ್ತಿತ್ವದಲ್ಲಿರುವ ಉತ್ಪನ್ನಗಳು ರೋಗವನ್ನು ನಿರ್ಮೂಲನೆ ಮಾಡುವಲ್ಲಿ ಅಥವಾ ಏಕಾಏಕಿ ತಡೆಯುವಲ್ಲಿ ವಿಫಲವಾಗಿವೆ (ಲಸಿಕೆಗಳು ಮತ್ತು ಔಷಧಿಗಳ ಸಂದರ್ಭದಲ್ಲಿ).
  3. ಔಷಧಗಳು ಮತ್ತು ಲಸಿಕೆಗಳ ವಿಷಯದಲ್ಲಿ ಪ್ರಸ್ತುತ ಉತ್ತಮ ಉತ್ಪಾದನಾ ಅಭ್ಯಾಸಗಳ (Good Manufacturing Practices- GMP) ಮತ್ತು ‘ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್’ (IVD) ಸಂದರ್ಭದಲ್ಲಿ ಕ್ರಿಯಾತ್ಮಕ ‘ಗುಣಮಟ್ಟ ನಿರ್ವಹಣಾ ವ್ಯವಸ್ಥೆ’ (Quality Management System (QMS) ಗೆ ಅನುಗುಣವಾಗಿ ಉತ್ಪನ್ನವನ್ನು ತಯಾರಿಸಲಾಗುತ್ತದೆ.
  4. ಉತ್ಪನ್ನದ ಅಭಿವೃದ್ಧಿಯನ್ನು ಪೂರ್ಣಗೊಳಿಸಲು ಅರ್ಜಿದಾರನು ಬದ್ಧನಾಗಿರಬೇಕು (IVD ಯ ಸಂದರ್ಭದಲ್ಲಿ ಉತ್ಪನ್ನದ ಪರಿಶೀಲನೆ ಮತ್ತು ಮೌಲ್ಯಮಾಪನ) ಮತ್ತು ಉತ್ಪನ್ನ ಪರವಾನಗಿ ಪಡೆದ ನಂತರ, ವಿಶ್ವ ಆರೋಗ್ಯ ಸಂಸ್ಥೆಯಿಂದ ಪೂರ್ವಭಾವಿತ್ವವನ್ನು (prequalification) ಪಡೆಯಲು ಉತ್ಪನ್ನಕ್ಕೆ ಅರ್ಜಿ ಸಲ್ಲಿಸುವುದು ಅವಶ್ಯಕ.

current affairs

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು – ಅವುಗಳ ರಚನೆ, ಆದೇಶ.

FATF ನ “ಗ್ರೇ ಲಿಸ್ಟ್” (ಬೂದು ಪಟ್ಟಿ)ನಲ್ಲಿಯೇ ಉಳಿಯಲಿರುವ ಪಾಕಿಸ್ತಾನ:


(Pakistan To Remain On “Grey List”)

ಸಂದರ್ಭ:

ಇತ್ತೀಚೆಗೆ, ‘ಹಣಕಾಸು ಕ್ರಿಯಾ ಕಾರ್ಯಪಡೆ’ (Financial Action Task Force- FATF)ಯು ಪಾಕಿಸ್ತಾನವನ್ನು ‘ಬೂದುಪಟ್ಟಿ’ ಯಿಂದ  (Grey List) ಹೊರಗೆ ತೆಗೆಯಲು ನಿರಾಕರಿಸಿದೆ. FATF ಪ್ರಕಾರ, ವಿಶ್ವಸಂಸ್ಥೆಯು ಗೊತ್ತುಪಡಿಸಿದ ಭಯೋತ್ಪಾದಕರಾದ 26/11 ರ ದಾಳಿಯ ಆರೋಪಿಗಳಾದ ಹಫೀಜ್ ಸಯೀದ್ ಮತ್ತು ಜೈಶ್-ಎ-ಮೊಹಮ್ಮದ್ (JeM) ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪಾಕಿಸ್ತಾನ ವಿಫಲವಾಗಿದೆ. ಈ ಪಟ್ಟಿಯಿಂದ ಹೊರಬರಲು, ಭಾರತಕ್ಕೆ ಬೇಕಾಗಿರುವ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಅವರಂತಹ ಮೋಸ್ಟ್ ವಾಂಟೆಡ್ ಭಯೋತ್ಪಾದಕರು ಮತ್ತು ಅವರ ನೇತೃತ್ವದ ಗುಂಪುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನವು ಮತ್ತೊಮ್ಮೆ ತೋರಿಸಬೇಕಾಗಿದೆ.

ಹಿನ್ನೆಲೆ:

2018 ರ ಜೂನ್‌ನಲ್ಲಿ, ಪ್ಯಾರಿಸ್ ಮೂಲದ ‘ಹಣಕಾಸು ಕ್ರಿಯಾ ಕಾರ್ಯಪಡೆ (FATF) ಯು ಪಾಕಿಸ್ತಾನವನ್ನು ‘ಬೂದು ಪಟ್ಟಿಯಲ್ಲಿ’(grey list ) ಇರಿಸಿದೆ ಮತ್ತು ಅಂದಿನಿಂದ ಈ ಪಟ್ಟಿಯಿಂದ ಹೊರಬರಲು ಪಾಕಿಸ್ತಾನವು ಹೆಣಗಾಡುತ್ತಿದೆ.

  1. ಪಾಕಿಸ್ತಾನಕ್ಕೆ 2018 ರಲ್ಲಿ 27 ಮಾನದಂಡಗಳನ್ನು (ಆಕ್ಷನ್ ಪಾಯಿಂಟ್‌ಗಳನ್ನು) ಜಾರಿಗೆ ತರಲು ಗಡುವು ನೀಡಲಾಗಿತ್ತು, ಈ ಪೈಕಿ ಪಾಕಿಸ್ತಾನವು ಇದುವರೆಗೆ 26 ಆಕ್ಷನ್ ಪಾಯಿಂಟ್‌ಗಳನ್ನು ಜಾರಿಗೆ ತಂದಿದೆ ಅಥವಾ ಪೂರೈಸಿದೆ.

ಮುಂದಿನ ನಡೆ ಏನು?

ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ನಿಂದ ಪಾಕಿಸ್ತಾನದ ತನ್ನ ಕ್ರಿಯಾ ಯೋಜನೆಯಲ್ಲಿ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ಕುರಿತ ತನಿಖೆ ಮತ್ತು ಯುಎನ್ ಘೋಷಿತ ಭಯೋತ್ಪಾದಕ ಗುಂಪುಗಳು ಮತ್ತು ಅವುಗಳ ನಾಯಕರು ಮತ್ತು ಕಮಾಂಡರ್‌ಗಳ ವಿರುದ್ಧ ವಿಚಾರಣೆಯನ್ನು ನಡೆಸಿ  ತೆಗೆದುಕೊಳ್ಳಲಾಗುತ್ತಿರುವ ಕಾನೂನೂ ಕ್ರಮಗಳನ್ನು ತೋರಿಸಲು ಕೇಳಲಾಗಿದೆ.

FATF ನ ಕುರಿತು:

  1. ಪ್ಯಾರಿಸ್ ನಲ್ಲಿ ನಡೆದ ಜಿ -7 ದೇಶಗಳ ಸಭೆಯ ಉಪಕ್ರಮದ ಅನ್ವಯ 1989 ರಲ್ಲಿ, ಹಣಕಾಸು ಕ್ರಿಯಾ ಕಾರ್ಯಪಡೆಯು ಒಂದು ಅಂತರ್ ಸರ್ಕಾರಿ ಸಂಸ್ಥೆಯ ರೂಪದಲ್ಲಿ ರಚನೆಯಾಯಿತು.
  2. ಇದು ‘ನೀತಿ-ರೂಪಿಸುವ ಸಂಸ್ಥೆ’ ಆಗಿದ್ದು, ರಾಷ್ಟ್ರಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಶಾಸಕಾಂಗ ಮತ್ತು ನಿಯಂತ್ರಕ ಸುಧಾರಣೆಗಳನ್ನು ಕೈಗೊಳ್ಳಲು ಅಗತ್ಯವಾದ ರಾಜಕೀಯ ಇಚ್ಛಾಶಕ್ತಿಯನ್ನು ಸೃಷ್ಟಿಸುತ್ತದೆ.
  3. ಇದರ ಸಚಿವಾಲಯ ಅಥವಾ ಕೇಂದ್ರ ಕಚೇರಿಯನ್ನು ಪ್ಯಾರಿಸ್‌ನ ‘ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಕೇಂದ್ರ (Economic Cooperation and Development- OECD) ಕಚೇರಿಯಲ್ಲಿ ಸ್ಥಾಪಿಸಲಾಗಿದೆ.

ಪಾತ್ರಗಳು ಮತ್ತು ಕಾರ್ಯಗಳು:

  1. ಹಣ ವರ್ಗಾವಣೆಯನ್ನು ಎದುರಿಸುವ ಕ್ರಮಗಳನ್ನು ತನಿಖೆ ಮಾಡಲು ಮತ್ತು ಅಭಿವೃದ್ಧಿಪಡಿಸಲು FATF ಅನ್ನು ಆರಂಭದಲ್ಲಿ ಸ್ಥಾಪಿಸಲಾಯಿತು.
  2. ಅಕ್ಟೋಬರ್ 2001 ರಲ್ಲಿ, ಹಣ ವರ್ಗಾವಣೆಯ ಜೊತೆಗೆ ಭಯೋತ್ಪಾದಕ ಹಣಕಾಸನ್ನು ಎದುರಿಸುವ ಪ್ರಯತ್ನಗಳನ್ನು ಸೇರಿಸಲು ಎಫ್‌ಎಟಿಎಫ್ ತನ್ನ ಆದೇಶವನ್ನು ವಿಸ್ತರಿಸಿತು.
  3. ಏಪ್ರಿಲ್ 2012 ರಲ್ಲಿ, ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣಕ್ಕಾಗಿ ಹಣವನ್ನು ನಿರ್ಬಂಧಿಸುವ ತನ್ನ ಪ್ರಯತ್ನಗಳಿಗೆ ಅದು ಸೇರಿಸಿತು.

ಸಂಯೋಜನೆ:

‘ಹಣಕಾಸು ಕ್ರಿಯಾ ಕಾರ್ಯಪಡೆಯು’ /  (Financial Action Task Force- FATF) ಪ್ರಸ್ತುತ 39 ಸದಸ್ಯರನ್ನು ಒಳಗೊಂಡಿದೆ. ಇದರ ಸದಸ್ಯರು ವಿಶ್ವದ ಎಲ್ಲಾ ಭಾಗಗಳಲ್ಲಿನ ಹಣಕಾಸು ಕೇಂದ್ರಗಳನ್ನು ಪ್ರತಿನಿಧಿಸುತ್ತಾರೆ. ಇದು 2 ಪ್ರಾದೇಶಿಕ ಸಂಸ್ಥೆಗಳನ್ನು ಒಳಗೊಂಡಿದೆ – ಗಲ್ಫ್ ಆಫ್ ಕೋಆಪರೇಷನ್ ಕೌನ್ಸಿಲ್ (GCC) ಮತ್ತು ಯುರೋಪಿಯನ್ ಕಮಿಷನ್ (EC). ಇದು ವೀಕ್ಷಕರನ್ನು ಮತ್ತು ಸಹಾಯಕ ಸದಸ್ಯರನ್ನು (ದೇಶಗಳು) ಸಹ ಹೊಂದಿದೆ.

ಏನಿದು FATF ನ ಕಪ್ಪು ಪಟ್ಟಿ ಮತ್ತು ಬೂದು ಪಟ್ಟಿ?

ಕಪ್ಪು ಪಟ್ಟಿ(Black List): ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿತ ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಈ ಚಟುವಟಿಕೆಗಳನ್ನು ನಿಷೇಧಿಸುವ ಜಾಗತಿಕ ನಿಬಂಧನೆಗಳೊಂದಿಗೆ ಸಹಕರಿಸದ ಸಹಕಾರೇತರ ದೇಶಗಳನ್ನು (Non-Cooperative Countries or Territories- NCCTs) ‘ಕಪ್ಪು ಪಟ್ಟಿಯಲ್ಲಿ’ ಇರಿಸಲಾಗಿದೆ. ‘ಹಣಕಾಸು ಕ್ರಿಯಾ ಕಾರ್ಯಪಡೆಯು’ ಹೊಸ ನಮೂದುಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಕಪ್ಪುಪಟ್ಟಿಯನ್ನು ನಿಯಮಿತವಾಗಿ ತಿದ್ದುಪಡಿ ಮಾಡುತ್ತದೆ.

ಬೂದು ಪಟ್ಟಿ(Grey List): ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆಗೆ  ಸಂಬಂಧಿತ ಚಟುವಟಿಕೆಗಳಿಗೆ ಸುರಕ್ಷಿತವೆಂದು ಪರಿಗಣಿಸಲಾದ ದೇಶಗಳನ್ನು FATF ‘ಬೂದು ಪಟ್ಟಿಯಲ್ಲಿ’ ಸೇರಿಸುತ್ತದೆ. ಈ ಬೂದು ಪಟ್ಟಿಗೆ ಸೇರುವ ದೇಶಕ್ಕೆ ಕಪ್ಪುಪಟ್ಟಿಗೆ ಪ್ರವೇಶಿಸಬಹುದಾದ ಎಚ್ಚರಿಕೆಯ ಗಂಟೆಯಾಗಿ FATF ಕಾರ್ಯನಿರ್ವಹಿಸುತ್ತದೆ.

‘ಬೂದು ಪಟ್ಟಿಯಲ್ಲಿ’ ಸೇರ್ಪಡೆಗೊಂಡ ದೇಶಗಳು ಈ ಕೆಳಗಿನ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ:

  1. IMF, ವಿಶ್ವ ಬ್ಯಾಂಕ್, ADBಯಿಂದ ಆರ್ಥಿಕ ನಿರ್ಬಂಧಗಳು.
  2. ಐಎಂಎಫ್, ವಿಶ್ವ ಬ್ಯಾಂಕ್, ಎಡಿಬಿ ಮತ್ತು ಇತರ ದೇಶಗಳಿಂದ ಸಾಲ ಪಡೆಯುವಲ್ಲಿ ಸಮಸ್ಯೆ.
  3. ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಕಡಿತ.
  4. ಅಂತರರಾಷ್ಟ್ರೀಯ ವೇದಿಕೆಗಳಿಂದ ಬಹಿಷ್ಕಾರ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಭಾರತ್ ನೆಟ್ ಯೋಜನೆ:


(BharatNet project)

 ಸಂದರ್ಭ:

ಇತ್ತೀಚೆಗೆ ‘ಭಾರತ್ ನೆಟ್ ಯೋಜನೆ’ಯ ಅನುಷ್ಠಾನಕ್ಕೆ ‘ತಮಿಳುನಾಡು ಫೈಬರ್ ನೆಟ್ ಕಾರ್ಪ್’ ಒಪ್ಪಂದಕ್ಕೆ ಸಹಿ ಹಾಕಿದೆ.

  1. ದೇಶದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ 1 Gbps ಬ್ಯಾಂಡ್‌ವಿಡ್ತ್ ಸಂಪರ್ಕವನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಭಾರತ್ ನೆಟ್ ಯೋಜನೆ ಬಗ್ಗೆ:

  1. ಭಾರತ್ ನೆಟ್ ಪ್ರಾಜೆಕ್ಟ್ ಅನ್ನು ಮೂಲತಃ 2011 ರಲ್ಲಿ ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್ವರ್ಕ್ (NOFN) ಎಂದು ಪ್ರಾರಂಭಿಸಲಾಯಿತು ಮತ್ತು ಇದನ್ನು 2015 ರಲ್ಲಿ ಭಾರತ್-ನೆಟ್ (BharatNet) ಎಂದು ಮರುನಾಮಕರಣ ಮಾಡಲಾಯಿತು.
  2. ಇದು ಆಪ್ಟಿಕಲ್ ಫೈಬರ್ ಮೂಲಕ5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ (GPs) ಸಂಪರ್ಕವನ್ನು ಒದಗಿಸಲು ಪ್ರಯತ್ನಿಸುತ್ತದೆ.
  3. ಇದು ಭಾರತ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಲಿಮಿಟೆಡ್ (Bharat Broadband Network Ltd -BBNL) ಜಾರಿಗೆ ತಂದ ಪ್ರಮುಖ ಮಿಷನ್.
  4. ಇದರ ಉದ್ದೇಶ,ಇ-ಆಡಳಿತ, ಇ-ಆರೋಗ್ಯ, ಇ-ಶಿಕ್ಷಣ, ಇ-ಬ್ಯಾಂಕಿಂಗ್, ಇಂಟರ್ನೆಟ್ ಮತ್ತು ಇತರ ಸೇವೆಗಳನ್ನು ಗ್ರಾಮೀಣ ಭಾರತಕ್ಕೆ ತಲುಪಿಸಲು ಅನುಕೂಲ ಮಾಡುವುದಾಗಿದೆ.

ಯೋಜನೆಯಡಿಯಲ್ಲಿ ವಿಶಾಲ ಪರಿಕಲ್ಪನೆಗಳು:

  1. ತಾರತಮ್ಯರಹಿತವಾಗಿ ಪ್ರವೇಶಿಸಬಹುದಾದ ಹೆಚ್ಚು ಸ್ಕೇಲೆಬಲ್ ನೆಟ್‌ವರ್ಕ್ ಮೂಲಸೌಕರ್ಯವನ್ನು ಸ್ಥಾಪಿಸುವುದು.
  2. ಎಲ್ಲಾ ಮನೆಗಳಿಗೆ 2 Mbps ನಿಂದ 20 Mbps ಮತ್ತು ಎಲ್ಲಾ ಸಂಸ್ಥೆಗಳಿಗೆ ಅವರ ಬೇಡಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಕೈಗೆಟುಕುವ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸುತ್ತದೆ.
  3. ರಾಜ್ಯಗಳು ಮತ್ತು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಡಿಜಿಟಲ್ ಇಂಡಿಯಾದ ದೃಷ್ಟಿಯನ್ನು ಸಾಕಾರಗೊಳಿಸುವುದು.

ಅನುಷ್ಠಾನ:

ಈ ಯೋಜನೆಯು ಕೇಂದ್ರ-ರಾಜ್ಯ ಸಹಕಾರಿ ಯೋಜನೆ (Centre-State collaborative project) ಯಾಗಿದ್ದು, ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಸ್ಥಾಪಿಸಲು ರಾಜ್ಯಗಳು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಮಾಡಲು ಅಧಿಕಾರ ನೀಡಲಾಗಿದೆ.

ಇಡೀ ಯೋಜನೆಗೆ, ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಟೆಲಿಕಾಂ ಸೇವೆಗಳನ್ನು ಸುಧಾರಿಸಲು ಸ್ಥಾಪಿಸಲಾದ ಯೂನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್ (Universal service Obligation Fund -USOF) ನಿಂದ ಧನಸಹಾಯ ನೀಡಲಾಗುತ್ತಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮೂಲಸೌಕರ್ಯ: ಇಂಧನ, ಬಂದರುಗಳು, ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲ್ವೆ ಇತ್ಯಾದಿ.

ಉಡಾನ್ ಯೋಜನೆ:


(UDAN scheme)

ಸಂದರ್ಭ:

ಭಾರತ ಸರ್ಕಾರವು ಉಡಾನ್ ಉಪಕ್ರಮದ ಕೊಡುಗೆಯನ್ನು ಗುರುತಿಸಿ, ಅಕ್ಟೋಬರ್ 21 ಅನ್ನು ಉಡಾನ್ ದಿವಸ (UDAN Day) ಎಂದು ಆಚರಿಸಲು ಘೋಷನೆ ಮಾಡಿದೆ. ಅಕ್ಟೋಬರ್ 21 ರಂದು, ‘ಉಡಾನ್ ಯೋಜನೆ’ಯ ದಾಖಲೆಗಳನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಾಯಿತು.

ಉಡಾನ್ ಯೋಜನೆಯ ಬಗ್ಗೆ:

  1. ದೇಶದ ದೂರದ ಮತ್ತು ಪ್ರಾದೇಶಿಕ ಪ್ರದೇಶಗಳಿಗೆ ಸಂಪರ್ಕವನ್ನು ಹೆಚ್ಚಿಸುವುದು ಮತ್ತು ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
  2. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ರಾಷ್ಟ್ರೀಯ ನಾಗರಿಕ ವಿಮಾನಯಾನ ನೀತಿಯ ಪ್ರಮುಖ ಅಂಶವಾಗಿದೆ ಮತ್ತು ಇದನ್ನು ಜೂನ್ 2016 ರಲ್ಲಿ ಪ್ರಾರಂಭಿಸಲಾಯಿತು.
  3. ಈ ಯೋಜನೆಯಡಿಯಲ್ಲಿ, ಉಡಾನ್ ವಿಮಾನಗಳಲ್ಲಿನ ಅರ್ಧದಷ್ಟು ಆಸನಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ, ಮತ್ತು ಭಾಗವಹಿಸುವ ವಿಮಾನ ಸಂಸ್ಥೆಗಳಿಗೆ ನಿರ್ದಿಷ್ಟ ಪ್ರಮಾಣದ ‘ಕಾರ್ಯಸಾಧ್ಯತೆಯ ಅಂತರ ನಿಧಿ’ (viability gap funding- VGF) ಯನ್ನು ನೀಡಲಾಗುತ್ತದೆ, ಮತ್ತು ಇದು ಕೇಂದ್ರ ಮತ್ತು ಆಯಾ ರಾಜ್ಯಗಳ ನಡುವೆ ಹಂಚಿಕೆಯಾದ ಮೊತ್ತವಾಗಿದೆ.
  4. ಈ ಯೋಜನೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಹಣ ನೀಡಲಿವೆ.
  5. ಈ ಯೋಜನೆ 10 ವರ್ಷಗಳವರೆಗೆ ಮುಂದುವರಿಯುತ್ತದೆ ಮತ್ತು ನಂತರ ಅದನ್ನು ವಿಸ್ತರಿಸಬಹುದು.

current affairs

 

ಉಡಾನ್ 4.0:

  1. ಭಾರತದ ಈಶಾನ್ಯ ಪ್ರದೇಶಗಳು, ಗುಡ್ಡಗಾಡು ರಾಜ್ಯಗಳು ಮತ್ತು ದ್ವೀಪಗಳ ಮೇಲೆ ವಿಶೇಷ ಗಮನಹರಿಸಿ ನಾಲ್ಕನೇ ಸುತ್ತಿನ ಉಡಾನ್ (UDAN 4.0) ಯೋಜನೆಯನ್ನು ಡಿಸೆಂಬರ್ 2019 ರಲ್ಲಿ ಪ್ರಾರಂಭಿಸಲಾಯಿತು.
  2. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಈಗಾಗಲೇ ಅಭಿವೃದ್ಧಿಪಡಿಸಿರುವ ವಿಮಾನ ನಿಲ್ದಾಣಗಳಿಗೆ ಯೋಜನೆಯಡಿ ಕಾರ್ಯಸಾಧ್ಯತೆ ಅಂತರ ನಿಧಿ (VGF) ನೀಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ.
  3. ಉಡಾನ್ 4.0 ಅಡಿಯಲ್ಲಿ, ಹೆಲಿಕಾಪ್ಟರ್ ಮತ್ತು ಸಮುದ್ರ-ವಿಮಾನ(seaplanes) ಕಾರ್ಯಾಚರಣೆಗಳನ್ನು ಸಹ ಸೇರಿಸಲಾಗಿದೆ.

ದಯವಿಟ್ಟು ಗಮನಿಸಿ:

‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಅಂಗವಾಗಿ ಉಡಾನ್‌ 4.1 ಅಡಿ ಈ ಬಿಡ್‌ ಆಹ್ವಾನಿಸಲಾಗುವುದು.

ಉಡಾನ್‌ ಯೋಜನೆಯ ಈ ಹಿಂದಿನ ಆವೃತ್ತಿಗಳಲ್ಲಿ ಒಳಪಡದ ಆದ್ಯತೆಯ ವಾಯುಮಾರ್ಗಗಳನ್ನು ಈ ಬಾರಿಯ ಬಿಡ್ಡಿಂಗ್‌ನಲ್ಲಿ ಪರಿಗಣಿಸಲಾಗುತ್ತದೆ.

ಉಡಾನ್‌ ಯೋಜನೆ ಆರಂಭವಾಗಿ ನಾಲ್ಕು ವರ್ಷಗಳಾಗಿದ್ದು, ಈ ಅವಧಿಯಲ್ಲಿ 325 ವಾಯುಮಾರ್ಗಗಳಲ್ಲಿ ವಿಮಾನ ಸೇವೆ ಆರಂಭಿಸಲಾಗಿದೆ. 5 ಹೆಲಿಪೋರ್ಟ್‌ ಹಾಗೂ ಎರಡು ವಾಟರ್‌ಏರೋಡ್ರೋಮ್‌ ಸೇರಿದಂತೆ 56 ವಿಮಾನನಿಲ್ದಾಣಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

 

ವಿಷಯಗಳು: ಜೀವ ವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆ.

ಭಾರತದ ಪಳೆಯುಳಿಕೆ ಇಂಧನ ಉತ್ಪಾದನೆಯು ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಮೀರಿದೆ:


(India’s fossil fuel production exceeds Paris Agreement goals)

ಸಂದರ್ಭ:

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ಇತ್ತೀಚಿನ ಪ್ರೊಡಕ್ಷನ್ ಗ್ಯಾಪ್ ರಿಪೋರ್ಟ್ (Production Gap Report) ಭಾರತ ಸೇರಿದಂತೆ 15 ಪ್ರಮುಖ ಪಳೆಯುಳಿಕೆ ಇಂಧನ ಉತ್ಪಾದಿಸುವ ದೇಶಗಳು 2015 ಪ್ಯಾರಿಸ್ ಹವಾಮಾನ ಒಪ್ಪಂದದ ಅಡಿಯಲ್ಲಿ ನಿಗದಿಪಡಿಸಿದ ಅವಶ್ಯಕತೆಗಳನ್ನು ಪೂರೈಸಲು ಸಿದ್ಧವಾಗಿಲ್ಲ ಎಂದು ಬಹಿರಂಗಪಡಿಸಿದೆ.

  1. ಪ್ಯಾರಿಸ್ ಒಪ್ಪಂದವು ಇಂಗಾಲದ ಹೊರಸೂಸುವಿಕೆಯ ಕಡಿತದ ಮೂಲಕ ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ “ಜಾಗತಿಕ ಸರಾಸರಿ ತಾಪಮಾನದ ಏರಿಕೆಯನ್ನು ಕೈಗಾರಿಕಾ ಪೂರ್ವಕ್ಕಿಂತ 2 ಡಿಗ್ರಿಗಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದು ಮತ್ತು ತಾಪಮಾನವನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.5 ಡಿಗ್ರಿಗಳಿಗೆ ಮಿತಿಗೊಳಿಸಲು ಪ್ರಯತ್ನಿಸುವುದು.

 

‘ಪ್ರೊಡಕ್ಷನ್ ಗ್ಯಾಪ್ ವರದಿ’ಯ ಪ್ರಮುಖ ಅಂಶಗಳು:

  1. ವರದಿಯ ಪ್ರಕಾರ,ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು ಅಗತ್ಯವಾದ ಮೊತ್ತಕ್ಕಿಂತ ಸರ್ಕಾರಗಳು 2030 ರಲ್ಲಿ ಶೇಕಡಾ 110 ರಷ್ಟು ಹೆಚ್ಚು ಪಳೆಯುಳಿಕೆ ಇಂಧನಗಳನ್ನು ಉತ್ಪಾದಿಸಲು ಯೋಜಿಸಿವೆ, ಒಟ್ಟಾರೆಯಾಗಿ,ಈ ಉತ್ಪಾದನೆಯು ಜಾಗತಿಕ ಮಟ್ಟದಲ್ಲಿ ತಾಪಮಾನ ಹೆಚ್ಚಳವನ್ನು 2 °C ಗೆ ಮಿತಿಗೊಳಿಸಲು ಅಗತ್ಯವಿರುವ ಪ್ರಮಾಣದ ಗುರಿಗಿಂತ 45 ಪ್ರತಿಶತದಷ್ಟು ಹೆಚ್ಚುವ ಸಾಧ್ಯತೆಯಿದೆ.
  2. 2040 ರ ಹೊತ್ತಿಗೆ, ಈ ಉತ್ಪಾದನೆಯು ಕ್ರಮವಾಗಿ 190% ಮತ್ತು 89% ರಷ್ಟು ಹೆಚ್ಚಾಗಬಹುದು.
  3. ವರದಿಯ ಭಾಗವಾಗಿ ಮಾಡಿದ ವಿಶ್ಲೇಷಣೆಯ ಪ್ರಕಾರ,ಈ 15 ದೇಶಗಳು 2020 ರಲ್ಲಿ ವಿಶ್ವದ ಒಟ್ಟು ಪಳೆಯುಳಿಕೆ ಇಂಧನ ಉತ್ಪಾದನೆಯ 75 ಪ್ರತಿಶತಕ್ಕೆ ಕಾರಣವಾಗಿವೆ.
  4. ಈ ದೇಶಗಳೆಂದರೆ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಜರ್ಮನಿ, ಭಾರತ, ಇಂಡೋನೇಷ್ಯಾ, ಕಝಾಕಿಸ್ತಾನ್, ಮೆಕ್ಸಿಕೋ, ನಾರ್ವೆ, ರಷ್ಯಾ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಯುನೈಟೆಡ್ ಕಿಂಗ್‌ಡಮ್ (ಯುಕೆ) ಮತ್ತು ಯುನೈಟೆಡ್ ಸ್ಟೇಟ್ಸ್ (ಯುಎಸ್).

ಈಗ ಮಾಡಬೇಕಿರುವುದೇನು?

ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಪೂರೈಸಲು, ಇಡೀ ಜಗತ್ತಿಗೆ, ಜಾಗತಿಕ ತಾಪಮಾನ ಏರಿಕೆಯನ್ನು 1.5 °C ಗೆ ಸೀಮಿತಗೊಳಿಸಲು “ಜಾಗತಿಕ ಕಲ್ಲಿದ್ದಲು, ತೈಲ ಮತ್ತು ಅನಿಲ ಉತ್ಪಾದನೆಯಲ್ಲಿ (ಮತ್ತು ಬಳಕೆ) ತಕ್ಷಣ ದಿಂದಲೇ ಕಡಿತ” ಮಾಡುವ ಅಗತ್ಯವಿರುತ್ತದೆ.

ಭಾರತದ ಯೋಜನೆಗಳು Vs ಗುರಿಗಳು:

15 ದೇಶಗಳಲ್ಲಿ ಭಾರತವು ಪಳೆಯುಳಿಕೆ ಇಂಧನಗಳ ಏಳನೇ ಅತಿದೊಡ್ಡ ಉತ್ಪಾದಕವಾಗಿದೆ.

  1. ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ, ಭಾರತವು 2005 ರ ಮಟ್ಟಕ್ಕೆ ಹೋಲಿಸಿದರೆ 2030 ರ ವೇಳೆಗೆ ತನ್ನ ಆರ್ಥಿಕತೆಯ “ಹೊರಸೂಸುವಿಕೆಯ ತೀವ್ರತೆಯಲ್ಲಿ” 33%-35% ರಷ್ಟು ಕಡಿತಗೊಳಿಸುವುದಾಗಿ ವಚನ ನೀಡಿತ್ತು.
  2. ಆದಾಗ್ಯೂ, ಆತ್ಮನಿರ್ಭರ ಭಾರತ್ ಅಭಿಯಾನದ ಅಡಿಯಲ್ಲಿ, ಭಾರತ ಸರ್ಕಾರವು ಕಲ್ಲಿದ್ದಲು ಉತ್ಪಾದನೆಯಲ್ಲಿ ‘ಸ್ವಾವಲಂಬಿ’ ಯಾಗುವುದಾಗಿ ಪ್ರತಿಜ್ಞೆ ಮಾಡಿದೆ ಮತ್ತು ‘ಕಲ್ಲಿದ್ದಲು ಹೊರತೆಗೆಯುವಿಕೆ’ಗಾಗಿ ರೂ 500 ಶತಕೋಟಿ ಮೌಲ್ಯದ ಮೂಲಸೌಕರ್ಯ ಹೂಡಿಕೆ ಯೋಜನೆಯನ್ನು ರೂಪಿಸಿದೆ.

ಭಾರತದ ಮುಂದಿರುವ ಸವಾಲುಗಳು:

ಭಾರತದಲ್ಲಿ ಪಳೆಯುಳಿಕೆ ಇಂಧನಗಳ ಉತ್ಪಾದನೆಯನ್ನು ಕಡಿಮೆ ಮಾಡಲು ಅಥವಾ ನವೀಕರಿಸಬಹುದಾದ ಇಂಧನಕ್ಕೆ ನ್ಯಾಯಯುತ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಯಾವುದೇ ಫೆಡರಲ್ ಮಟ್ಟದ ನೀತಿ ಇಲ್ಲ.

ಪಳೆಯುಳಿಕೆ ಇಂಧನಗಳ ಬಳಕೆಯನ್ನು ಮಿತಿಗೊಳಿಸುವ ಅಗತ್ಯತೆ:

ಪಳೆಯುಳಿಕೆ ಇಂಧನದ ಬಳಕೆಯಿಂದ ಉಂಟಾಗುವ ವಾಯು ಮಾಲಿನ್ಯದ ಜಾಗತಿಕ ವೆಚ್ಚ ಹೆಚ್ಚಾಗಿದೆ: ಇದು ವರ್ಷಕ್ಕೆ ಸರಿಸುಮಾರು $ 2.9 ಟ್ರಿಲಿಯನ್, ಅಥವಾ ದಿನಕ್ಕೆ $ 8 ಬಿಲಿಯನ್, ಇದು ವಿಶ್ವದ ಜಿಡಿಪಿಯ 3.3 ಪ್ರತಿಶತಕ್ಕೆ ಸಮನಾಗಿದೆ.

  1. ಪಳೆಯುಳಿಕೆ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ಎದುರಿಸಲು ಭಾರತವು ಸುಮಾರು 150 ಬಿಲಿಯನ್ ಡಾಲರ್ ಖರ್ಚು ಮಾಡಬೇಕಾಗಿದೆ ಎಂದು ಅಂದಾಜಿಸಲಾಗಿದೆ.

ಮುಂದಿರುವ ಒಟ್ಟಾರೆ ಸವಾಲುಗಳು:

  1. ಇಲ್ಲಿಯವರೆಗೆ, ಮಾನವ ಚಟುವಟಿಕೆಗಳು ‘ಜಾಗತಿಕ ತಾಪಮಾನ’ವನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ (1950-1900) ಸುಮಾರು 1 ಡಿಗ್ರಿ ಸೆಲ್ಸಿಯಸ್ ಹೆಚ್ಚಿಸಿವೆ.
  2. ಪ್ರಸ್ತುತ, ದೇಶಗಳು ನಿಗದಿಪಡಿಸಿದ ಹೊರಸೂಸುವಿಕೆ ಗುರಿಗಳು ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿಗಿಂತ ಕಡಿಮೆ ಮಾಡುವ ಗುರಿಗೆ ಅನುಗುಣವಾಗಿಲ್ಲ.

ಪ್ಯಾರಿಸ್ ಹವಾಮಾನ ಒಪ್ಪಂದದಿಂದ ನಿಗದಿಪಡಿಸಿದ ಗುರಿಗಳು:

2015 ರಲ್ಲಿ 195 ದೇಶಗಳು ಸಹಿ ಮಾಡಿದ ‘ಪ್ಯಾರಿಸ್ ಹವಾಮಾನ ಒಪ್ಪಂದ’ ಅಡಿಯಲ್ಲಿ, ಮುಂಬರುವ ದಶಕಗಳಲ್ಲಿ ಹವಾಮಾನ ಬದಲಾವಣೆಯನ್ನು ಮಿತಿಗೊಳಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.

  1. ಒಪ್ಪಂದವು ಇಂಗಾಲದ ಹೊರಸೂಸುವಿಕೆಯ ಕಡಿತದ ಮೂಲಕ ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ “ಜಾಗತಿಕ ಸರಾಸರಿ ತಾಪಮಾನದ ಏರಿಕೆಯನ್ನು ಕೈಗಾರಿಕಾ ಪೂರ್ವಕ್ಕಿಂತ 2 ಡಿಗ್ರಿಗಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದು ಮತ್ತು ತಾಪಮಾನವನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.5 ಡಿಗ್ರಿಗಳಿಗೆ ಮಿತಿಗೊಳಿಸಲು ಪ್ರಯತ್ನಿಸುವುದು.” ಅಥವಾ
  2. ಇಂಗಾಲದ ಹೊರಸೂಸುವಿಕೆಯ ಕಡಿತದ ಮೂಲಕ “ಜಾಗತಿಕ ಸರಾಸರಿ ಉಷ್ಣತೆಯ ಏರಿಕೆಯನ್ನು ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 2 ಡಿಗ್ರಿಗಿಂತ ಕಡಿಮೆ ಇರುವಂತೆ ಮಾಡುವುದು” ಒಪ್ಪಂದದ ಗುರಿಯಾಗಿದೆ ಮತ್ತು ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 1.5 ಡಿಗ್ರಿ ತಾಪಮಾನ ಏರಿಕೆಯನ್ನು ಸೀಮಿತಗೊಳಿಸುವ ಪ್ರಯತ್ನಗಳು ಜಾಗತಿಕ ತಾಪಮಾನ ಏರಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಗುರಿಯನ್ನು ಹೊಂದಿವೆ.

 

Note: ಪ್ಯಾರಿಸ್‌ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಭಾರತವು 2016 ರ ಅ.2 ರಂದು ಅನುಮೋದನೆ ನೀಡಿದೆ. ಒಪ್ಪಂದಕ್ಕೆ ಈ ವರೆಗೂ 61 ರಾಷ್ಟ್ರಗಳು ಅನುಮೋದನೆ ನೀಡಿದ್ದು, 62 ನೇ ರಾಷ್ಟ್ರವಾಗಿ ಭಾರತ ಗಾಂಧಿ ಜಯಂತಿ ದಿನದಂದು ಐತಿಹಾಸಿಕ ಒಪ್ಪಂದವನ್ನು ಅನುಮೋದಿಸಿದೆ.

ಭಾರತ ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿದ ಕ್ರಮಗಳನ್ನು ಜಾರಿಗೆ ತರಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಹುರುಪು ಮೂಡಿದಂತಾಗಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪ್ಯಾರಿಸ್‌ ಒಪ್ಪಂದ (ಸಿಒಪಿ21)ಕ್ಕೆ ಅನುಮೋದನೆ ಬಾಕಿ ಇದ್ದು, ಅದನ್ನು ಗಾಂಧಿ ಜಯಂತಿ ದಿನ ಅನುಮೋದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಕೇರಳದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದಾಗ ಹೇಳಿದ್ದರು.

ಜಾಗತಿಕ ತಾಪಮಾನಕ್ಕೆ ಕಡಿವಾಣ ಹಾಕಲು, ಹವಾಮಾನ ಬದಲಾವಣೆಯಿಂದಾಗಿ ಅನಾಹುತ ಎದುರಿಸುತ್ತಿರುವ ದೇಶಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ 2015 ರ ಡಿಸೆಂಬರ್‌ ನಲ್ಲಿ ಪ್ಯಾರಿಸ್‌ನಲ್ಲಿ ನಡೆದ ಶೃಂಗದಲ್ಲಿ, ಹವಾಮಾನ ಒಪ್ಪಂದಕ್ಕೆ 190ಕ್ಕೂ ಹೆಚ್ಚು ದೇಶಗಳು ಒಪ್ಪಿಗೆ ನೀಡಿದ್ದವು. ಒಪ್ಪಂದ ಜಾರಿಯಾಗಬೇಕಿದ್ದರೆ ಕನಿಷ್ಠ 55 ರಾಷ್ಟ್ರಗಳು ಅದಕ್ಕೆ ಅನುಮೋದನೆ ನೀಡಬೇಕಿತ್ತು. ಈಗ ಭಾರತವೂ ಸೇರಿದಂತೆ ಸಿಒಪಿ 21 ಕ್ಕೆ ಒಟ್ಟು 62 ರಾಷ್ಟ್ರಗಳು ಅನುಮೋದನೆ ನೀಡಿವೆ.

ಒಪ್ಪಂದದ ಸ್ಥಿರೀಕರಣಕ್ಕೆ ಭಾರತ ಕೈಗೊಂಡಿರುವ ನಿರ್ಧಾರ ವಿಶ್ವದಲ್ಲಿರುವ ವಿವಿಧ ದೇಶಗಳ ಒಟ್ಟು ಹೊಸಸೂಸುವಿಕೆಯ ಮಿತಿಯನ್ನು ಶೇ.51.89ರ ಸ್ಥಿರೀಕರಣಗೊಳಿಸಲು ಸಹಕಾರಿಯಾಗಿದೆ. , ಪ್ಯಾರಿಸ್ ಒಪ್ಪಂದವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ ದೇಶಗಳಲ್ಲಿ ಭಾರತವೂ ಒಂದಾಗಿದೆ.

 

ಭಾರತಕ್ಕೆ ಈ ಸಮಯದ ಅವಶ್ಯಕತೆ:

  1. ಪಳೆಯುಳಿಕೆ ಇಂಧನಗಳ ಸ್ಥಳೀಯ ಪರಿಶೋಧನೆಗೆ ಕಡಿಮೆ ಒತ್ತು ನೀಡಬೇಕು.
  2. ಉತ್ಪಾದಕ ಪ್ರದೇಶಗಳ ಉತ್ಪಾದಕತೆಯನ್ನು ಹೆಚ್ಚಿಸಬೇಕು.
  3. ಕಾರ್ಯತಂತ್ರದ ಮೀಸಲು ಹೆಚ್ಚಿಸಬೇಕು.
  4. ಸಾರ್ವಜನಿಕ ವಲಯದ ಪೆಟ್ರೋಲಿಯಂ ಕಂಪನಿಗಳನ್ನು ಪುನರ್ರಚಿಸಬೇಕು ಮತ್ತು ಪುನರ್ನಿರ್ಮಿಸಬೇಕು.
  5. ಸೀಮಿತ ಚಿಂತನೆಯನ್ನು ತಪ್ಪಿಸಬೇಕು.

paris_climate_agreement

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


 ಜಿಯೋರಿಸ್ಸ ಮಾಸ್ಮಾಯೆನ್ಸಿಸ್:

(Georissa mawsmaiensis)

  1. ಇತ್ತೀಚೆಗೆ, ಮೇಘಾಲಯದಲ್ಲಿ, ಸುಣ್ಣದ ಕಲ್ಲಿನಿಂದ ನಿರ್ಮಿತವಾದ ‘ಮಾವ್ಸ್ಮೈ ಗುಹೆ’(Mawsmai Cave) ಯಲ್ಲಿ ಜಿಯೋರಿಸ್ಸ ಮಾಸ್ಮೈಯೆನ್ಸಿಸ್ (Georissa mawsmaiensis) ಎಂಬ ಹೆಸರಿನ ಒಂದು ಬಗೆಯ ಸೂಕ್ಷ್ಮ ಬಸವನ ಹುಳು ಪ್ರಭೇದವನ್ನು ಪತ್ತೆಹಚ್ಚಲಾಗಿದೆ. ಈ ಜಾತಿಯನ್ನು ಕೊನೆಯದಾಗಿ 170 ವರ್ಷಗಳ ಹಿಂದೆ ನೋಡಲಾಗಿತ್ತು.
  2. ಈ ಹೊಸ ಜಾತಿಯ ರೀತಿಯ ಮತ್ತೊಂದು ಸದಸ್ಯ ಜಿಯೋರಿಸ್ಸಾ ಸರಿಟ್ಟಾ (Georissa saritta), ವನ್ನು1851 ರಲ್ಲಿ ಚಿರಾಪುಂಜಿ ಬಳಿಯ ಮುಸ್ಮೈ (ಮಾವಸ್ಮೈ) ಕಣಿವೆಯಲ್ಲಿ ಕಂಡುಹಿಡಿಯಲಾಗಿತ್ತು.
  3. ಜಿಯೊರಿಸ್ಸಾ ಕುಲದ (Georissa Genus) ಇವುಗಳು ಆಫ್ರಿಕಾ, ಏಷ್ಯಾ ಮತ್ತು ಪೆಸಿಫಿಕ್‌ನಲ್ಲಿ ವ್ಯಾಪಕವಾಗಿ ಕಾಣಸಿಗುತ್ತವೆ. ಆದಾಗ್ಯೂ ಅವುಗಳು ಸುಣ್ಣದ ಕಲ್ಲು ಗುಹೆಗಳು ಅಥವಾ ಸುಣ್ಣದ ಕಲ್ಲುಗಳ ಕರಗುವಿಕೆಯಿಂದ ರೂಪುಗೊಂಡ ಕಾರ್ಸ್ಟ್ ಭೂದೃಶ್ಯಗಳನ್ನು ಒಳಗೊಂಡಿರುವ ಸೂಕ್ಷ್ಮ ಆವಾಸಸ್ಥಾನಗಳಿಗೆ ಸೀಮಿತವಾಗಿವೆ.

 ‘ಮಾವ್ಸ್ಮೈ ಗುಹೆ’(Mawsmai Cave) ಯ ಕುರಿತು:

  1. ಇದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಚಿರಾಪುಂಜಿ (ಸೊಹ್ರಾ) ದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಮೊಸ್ಮೈ ಎಂಬ ಸಣ್ಣ ಹಳ್ಳಿಯಲ್ಲಿದೆ.
  2. ಖಾಸಿ ಭಾಷೆಯಲ್ಲಿ ‘ಮಾವ್ಸ್ಮೈ’ ಪದದ ಅರ್ಥ ‘ಆಣೆ ಕಲ್ಲು’ ಅಂದರೆ ‘ಪ್ರಮಾಣ ಕಲ್ಲು’(Oath Stone)ಎಂದರ್ಥ. ಖಾಸಿ ಜನರು ಗುಹೆಗೆ ‘ಕ್ರೆಮ್’ ಎಂಬ ಸ್ಥಳೀಯ ಪದವನ್ನು ಬಳಸುತ್ತಾರೆ.
  3. ಮಾವ್ಸ್ಮೈ ಗುಹೆಯು ಸಮುದ್ರ ಮಟ್ಟದಿಂದ 1,195 ಮೀಟರ್ ಎತ್ತರದಲ್ಲಿದೆ ಮತ್ತು ಪೂರ್ವ ಖಾಸಿ ಬೆಟ್ಟಗಳಿಂದ ಹುಟ್ಟಿದ ಕಿನ್ಶಿ ನದಿಯ ತೊರೆಗಳಿಂದ ಪರೋಕ್ಷವಾಗಿ ಪ್ರಭಾವಿತವಾಗಿದೆ.

current affairs

ಸಖರೋವ್ ಪ್ರಶಸ್ತಿ:

(Sakharov Prize)

ಜೈಲಿನಲ್ಲಿರುವ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ (Alexei Navalny) ಅವರಿಗೆ ಇತ್ತೀಚೆಗೆ ಯುರೋಪಿಯನ್ ಒಕ್ಕೂಟದ ಉನ್ನತ ಮಾನವ ಹಕ್ಕುಗಳ ಪ್ರಶಸ್ತಿಯಾದ ಸಖರೋವ್ ಪ್ರಶಸ್ತಿಯನ್ನು ನೀಡಲಾಯಿತು.

  1. ‘ಸಖರೋವ್ ಪ್ರೈಜ್ ಫಾರ್ ಫ್ರೀಡಮ್ ಆಫ್ ಥಾಟ್’ ಅನ್ನು ಸಾಮಾನ್ಯವಾಗಿ ‘ಸಖರೋವ್ ಪ್ರಶಸ್ತಿ’ ಎಂದು ಕರೆಯಲಾಗುತ್ತದೆ. ಇದು ಯುರೋಪಿಯನ್ ಪಾರ್ಲಿಮೆಂಟ್ ನೀಡುವ ಉನ್ನತ ಮಾನವ ಹಕ್ಕುಗಳ ಪ್ರಶಸ್ತಿಯಾಗಿದೆ.
  2. ಮಾನವ ಹಕ್ಕುಗಳು ಮತ್ತು ಚಿಂತನೆಯ ಸ್ವಾತಂತ್ರ್ಯದ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ವ್ಯಕ್ತಿಗಳು ಅಥವಾ ಗುಂಪುಗಳಿಗೆ ಈ ಗೌರವ ಪ್ರಶಸ್ತಿಯನ್ನು ನೀಡಲಾಗುತ್ತದೆ.
  3. ರಷ್ಯಾದ ವಿಜ್ಞಾನಿ ಮತ್ತು ಬಂಡಾಯಗಾರ ‘ಆಂಡ್ರೇ ಸಖರೋವ್’ ಅವರ ಹೆಸರಿನಲ್ಲಿ ಡಿಸೆಂಬರ್ 1988 ರಲ್ಲಿ ಯುರೋಪಿಯನ್ ಪಾರ್ಲಿಮೆಂಟ್ ಈ ಪ್ರಶಸ್ತಿಯನ್ನು ಸ್ಥಾಪಿಸಿತು.

current affairs

ಬೋವೈನ್ ಮಾಸ್ಟಿಟಿಸ:

(Bovine Mastitis)

ಬೋವಿನ್ ಮಾಸ್ಟಿಟಿ (Bovine Mastitis) ಹಾಲು ಕರೆಯುವ ಪ್ರಾಣಿಗಳಲ್ಲಿ ಕಂಡುಬರುವ ಸಾಮಾನ್ಯ ಸಾಂಕ್ರಾಮಿಕ ರೋಗವಾಗಿದೆ. ಇದು ಹಾಲಿನ ಗುಣಮಟ್ಟವು ಕ್ಷೀಣಿಸಲು ಕಾರಣವಾಗುತ್ತದೆ, ಇದರಿಂದಾಗಿ ಕೃಷಿ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಕೊನೆಗೆ ಇದು ಆದಾಯ-ಸೃಜನೆಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.

  1. ಇದು ಅಪಾಯಕಾರಿ ಸಸ್ತನಿ ಗ್ರಂಥಿ ಸೋಂಕು ಆಗಿದ್ದು, ಇದು ವಿಶ್ವದಾದ್ಯಂತ ಹಾಲು ನೀಡುವ ಜಾನುವಾರುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
  2. ಮಾಸ್ಟಿಟಿಸ್ ರೋಗವು, ವೈರಸ್, ಮೈಕೋಪ್ಲಾಸ್ಮಾ, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಇತ್ಯಾದಿ ಸೂಕ್ಷ್ಮಜೀವಿಗಳಿಂದ ಉಂಟಾಗುತ್ತದೆ.
  3. ಪ್ರಾಣಿಗಳಲ್ಲಿ ಟೊನೆಲ್ಲಾ ರೋಗವು ವಿವಿಧ ಬ್ಯಾಕ್ಟೀರಿಯಾ, ವೈರಸ್‌ಗಳು, ಅಚ್ಚುಗಳು ಮತ್ತು ಯೀಸ್ಟ್‌ಗಳ ಸೋಂಕಿನಿಂದ ಉಂಟಾಗುತ್ತದೆ. ಇದರ ಹೊರತಾಗಿ, ಗಾಯ ಮತ್ತು ಋತುಮಾನಿಕ ಪ್ರತಿಕೂಲಗಳಿಂದಾಗಿ, ಟೊನೆಲ್ಲಾ ರೋಗವು ಉಂಟಾಗುತ್ತದೆ.

current affairs


Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos

[ad_2]

Leave a Comment